ಕೆನರಾ ಬ್ಯಾಂಕ್ ಅಧಿಕಾರಿ ಲತಾರವರಿಗೆ ಬೀಳ್ಕೊಡುಗೆ

0

ಪುತ್ತೂರು : ಸ್ವಯಂ ನಿವೃತ್ತಿ ಹೊಂದಿದ್ದ ನೆಹರು ನಗರ ವಿವೇಕಾನಂದ ಕಾಲೇಜು ಬಳಿಯ ಕೆನರಾ ಬ್ಯಾಂಕ್ ಅಧಿಕಾರಿ ಲತಾ.ಪಿ ಅವರನ್ನು ಜೂನ್.1ರಂದು, ಕಛೇರಿಯಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು. ನೆಹರು ನಗರ ನಿವಾಸಿಯಾಗಿರುವ ಲತಾರವರು ಸುಮಾರು 33 ವರುಷಗಳ ಸೇವೆಯನ್ನು ಸಲ್ಲಿಸಿ, ಇದೀಗ ಸ್ವಯಂ ನಿವೃತ್ತಿ ಹೊಂದಿರುತ್ತಾರೆ. ಶಾಖಾ ಪ್ರಬಂಧಕಿ ಸುಮನಾ ಶಿವರಾಮ್ ಅವರು ಕರ್ತವ್ಯದಿಂದ ನಿವೃತ್ತಿ ಹೊಂದಿದ ಲತಾ.ಪಿ ಯವರನ್ನು ಸಿಬ್ಬಂದಿ ವರ್ಗದ ಪರವಾಗಿ ಸನ್ಮಾನಿಸಿ, ಮುಂದಿನ ಜೀವನಕ್ಕೆ ಶುಭ ಹಾರೈಸಿದರು. ಈ ವೇಳೆ ಶಾಖೆಯ ಸಿಬ್ಬಂದಿಗಳೆಲ್ಲರೂ ಹಾಜರಿದ್ದರು.

LEAVE A REPLY

Please enter your comment!
Please enter your name here