ಪುತ್ತೂರು ಅನ್ಸಾರುದ್ದಿನ್ ಜಮಾಅತ್ ಕಮಿಟಿ ವತಿಯಿಂದ ಹಜ್ ಯಾತ್ರಾರ್ಥಿಗಳಿಗೆ ಹಜ್ ತರಬೇತಿ ಶಿಬಿರ

0

ಪುತ್ತೂರು: ಈ ವರ್ಷ ಪವಿತ್ರ ಹಜ್ ಯಾತ್ರೆಯನ್ನು ಕೈಗೊಳ್ಳಲ್ಲಿರುವ ಹಜ್ ಯಾತ್ರಾರ್ಥಿಗಳಿಗೆ ಒಂದು ದಿನದ ತರಬೇತಿ ಶಿಬಿರ ಪುತ್ತೂರು ಜುಮಾ ಮಸೀದಿಯ ಸಭಾಂಗಣದಲ್ಲಿ ನಡೆಯಿತು. ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಮತ್ತು ಹೆಲ್ಪ್‌ಲೈನ್ ಪುತ್ತೂರು ಇದರ ಸಹಯೋಗದೊಂದಿಗೆ ನಡೆದ ಹಜ್ ತರಬೇತಿ ಶಿಬಿರದ ಅಧ್ಯಕ್ಷತೆಯನ್ನು ವಹಿಸಿದ ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ ಅಬ್ದುಲ್ ರಝಾಕ್ ಹಾಜಿ ಮಾತನಾಡಿ ಹಜ್ ಯಾತ್ರಿಗಳಿಗೆ ಶುಭ ಹಾರೈಸಿದರು.

ಹಜ್ ತರಬೇತುದಾರ ಅಮಾನ್ ಟೂರ್‍ಸ್ ಟ್ರಾವೆಲ್ಸ್ ಮಾಲಕ ಕಬಕ ಜುಮಾ ಮಸೀದಿಯ ಖತೀಬರೂ ಆದ ಅಬ್ದುಲ್ ಹಮೀದ್ ಬಾಖವಿರವರು ಹಜ್ ತರಬೇತಿ ಶಿಬಿರವನ್ನು ನಡೆಸಿಕೊಟ್ಟರು. ಸಾಲ್ಮರ ಸಯ್ಯದ್‌ಮಲೆ ಜುಮ್ಮಾ ಮಸೀದಿಯ ಖತೀಬ್ ಉಮ್ಮರ್ ಧಾರಿಮಿ ಸಾಲ್ಮರ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಪುತ್ತೂರು ಹೆಲ್ಪ್‌ಲೈನ್ ನ ಪಿ.ಬಿ ಅಬ್ದುಲ್ಲ ಹಾಜಿ ಬಪ್ಪಳಿಗೆ, ಫಲೂಲ್ ಹಾಜಿ ಮತ್ತಿತರರು ಉಪಸ್ಥಿತರಿದ್ದರು. ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಸದಸ್ಯ ಶೇಖ್ ಜೈನುದ್ದೀನ್ ಸಹಕರಿಸಿದರು.

LEAVE A REPLY

Please enter your comment!
Please enter your name here