ಎಸ್.ಎಸ್.ಎಲ್.ಸಿ ಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಕಾಣಿಯೂರು ಪ್ರಗತಿಯ ಉತ್ತಮ್ ರವರಿಗೆ ಸನ್ಮಾನ

0

ಕಾಣಿಯೂರು: ಎಸ್.ಎಸ್.ಎಲ್.ಸಿ ಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಉತ್ತಮ್ ಜಿ ರವರಿಗೆ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವತಿಯಿಂದ ಸಂಸ್ಥೆಯ ಸಭಾಂಗಣದಲ್ಲಿ ಜೂ.7 ರಂದು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ, ಸಂಸ್ಥೆಯ ಟ್ರಸ್ಟಿ ದೇವಕಿರಣ್ ರೈ ಮಾದೋಡಿ, ಶಿಕ್ಷಕರಕ್ಷಕ ಸಂಘದ ಅಧ್ಯಕ್ಷ ಉಮೇಶ್ ಕೆ ಎಂ ಬಿ, ಉಪಾಧ್ಯಕ್ಷೆ ಜ್ಞಾನೇಶ್ವರಿ, ಶಾಲಾಡಳಿತಾಧಿಕಾರಿ ವಸಂತ ರೈ ಕಾರ್ಕಳ, ಮುಖ್ಯಗುರು ಸರಸ್ವತಿ ಎಂ, ವಿನಯ. ವಿ ಶೆಟ್ಟಿ, ಅನಿತಾ.ಜೆ ರೈ, ಹೇಮನಾಗೇಶ್ ರೈ, ವಿದ್ಯಾರ್ಥಿಯ ಬಗ್ಗೆ ಅಭಿಮಾನ ವ್ಯಕ್ತಪಡಿಸಿ ಶುಭ ಹಾರೈಸಿದರು.

ಉತ್ತಮ್ ಅವರ ತಂದೆ ಪದ್ಮನಾಭ ಗುಂಡಿಗದ್ದೆ, ತಾಯಿ ಹೇಮಾವತಿ ಮತ್ತು ಸಹೋದರಿ ಅಖಿಲಾ ಜಿ ಹಾಗೂ ಶಿಕ್ಷಕ ವೃಂದದವರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಉತ್ತಮ ಸಾಧನೆ ಮಾಡಿದ ಉತ್ತಮ್ ಜಿ ತನಗೆ ಮಾರ್ಗದರ್ಶನ ನೀಡಿದ ಗುರು ಹಿರಿಯರನ್ನು, ಸಂಚಾಲಕರನ್ನು ಸ್ಮರಿಸುತ್ತಾ ಸಂಸ್ಥೆಯ ಬಗ್ಗೆ ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here