ಪುರುಷರಕಟ್ಟೆ ಸಾರ್ವಜನಿಕ ಗಣೇಶೋತ್ಸವದ ವಿಗ್ರಹ ಮುಹೂರ್ತ

0

ಪುತ್ತೂರು: ಪುರುಷರಕಟ್ಟೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ನಡೆಯಲಿರುವ 23 ವರ್ಷದ ಶ್ರೀ ಗಣೇಶೋತ್ಸವದ ವಿಗ್ರಹ ರಚನೆಗೆ ಮುಹೂರ್ತ ಜೂ.12ರಂದು ಪರ್ಲಡ್ಕದಲ್ಲಿರುವ ತಾರಾನಾಥ ಆಚಾರ್ಯರವರ ಏಕದಂತ ಆರ್ಟ್ಸ್‌ನಲ್ಲಿ ನೆರವೇರಿತು.


ಕಲಾವಿದ ತಾರಾನಾಥ ಆಚಾರ್ಯರವರು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಗ್ರಹ ರಚನೆಗೆ ಮುಹೂರ್ತ ನೆರವೇರಿಸಿದರು. ಗಣೇಶೋತ್ಸವ ಸಮಿತಿಯ ಅಧ್ಯಕ್ಷ ವಿಶ್ವನಾಥ್ ಪುರುಷ ಪುರುಷರಕಟ್ಟೆಯವರು ಮಾತನಾಡಿ, 23ನೇ ವರ್ಷದ ಗಣೇಶೋತ್ಸವವು ವಿಜೃಂಭನೆಯಿಂದ ನಡೆಯಲು ಪ್ರತಿಯೊಬ್ಬರು ಸಹಕರಿಸುವಂತೆ ವಿನಂತಿಸಿದರು. ಕಾರ್ಯದರ್ಶಿ ಹರೀಶ್ ದೇವಾಡಿಗ ಮುಕ್ವೆ, ಖಜಾಂಚಿ ಕೃಷ್ಣಪ್ಪ ಶೆಟ್ಟಿ ಮಜಲು, ಮಾಜಿ ಅಧ್ಯಕ್ಷ ಉಮೇಶ್ ಇಂದಿರಾನಗರ, ಪ್ರಮುಖರಾದ ಬೇಬಿಜಾನ್ ಕೂಡುರಸ್ತೆ, ಸುಬ್ರಹ್ಮಣ್ಯ ಪೂಜಾರಿ ಪುರುಷರಕಟ್ಟೆ, ಸುರೇಶ್ ಕೊಡಿಮಜಲು, ದಿನೇಶ್ ಇಂದಿರಾನಗರ, ಕಾರ್ತಿಕ್ ಪೂಜಾರಿ ಇಂದಿರಾನಗರ ಸಹಿತ ಹಲವು ಮಂದಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here