ಪಂಚತತ್ವಾದ್ರಿ ಚಾಮುಂಡೇಶ್ವರೀ ಕ್ಷೇತ್ರದಲ್ಲಿ ಪ್ರತಿಷ್ಠಾ ಮಹೋತ್ಸವ

0

ಪುತ್ತೂರು: ಬೆಟ್ಟಂಪಾಡಿ ಗ್ರಾಮದ ಅಜ್ಜಿಕಲ್ಲು ಕುದ್ರೆಡ್ಕ ಬಳಿ ಇರುವ ಕಾರಣಿಕ ಕ್ಷೇತ್ರವಾದ ಇಳಾಸ್ ಪಂಚತತ್ವ ಫಾರ್ಮ್ಸ್ ಪಂಚತತ್ವಾದ್ರಿ ಶ್ರೀ ಚಾಮುಂಡೇಶ್ವರೀ ಕ್ಷೇತ್ರದಲ್ಲಿ ಪ್ರಥಮ ಪ್ರತಿಷ್ಠಾ ಮಹೋತ್ಸವ ಜೂ. 10 ರಂದು ಸಂಜೆ ನಡೆಯಿತು.


ಕ್ಷೇತ್ರದ ವ್ಯವಸ್ಥಾಪಕರಾದ ‘ಮಿಸ್ಟಿಕ್ ಲೈಟ್ ಕೌನ್ಸಿಲಿಂಗ್’ ನ ರಾಕೇಶ್ ಪಿ. ಶೆಟ್ಟಿ ಯವರು ಸತ್ಸಂಗ ನಡೆಸಿಕೊಟ್ಟರು. ಮೂಡಬಿದ್ರೆ ಶರತ್ ಕುಮಾರ್ ರವರು ಭಕ್ತಿಗೀತೆ ಹಾಡಿದರು.
ಭಜನಾ ಕಾರ್ಯಕ್ರಮ, ಸತ್ಸಂಗ,‌ ಸಾಮೂಹಿಕ ಪ್ರಾರ್ಥನೆ,‌ ಕಾಲಾವಧಿ ತಂಬಿಲ ಮತ್ತು ಹರಕೆ ತಂಬಿಲ, ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನೆರವೇರಿತು.
ಊರ ಪರವೂರ ಸುಮಾರು 500 ಮಿಕ್ಕಿ ಭಕ್ತಾಭಿಮಾನಿಗಳು ಪಾಲ್ಗೊಂಡು ದೇವರ ಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here