ಸಂಚಾರ ವಿಭಾಗದ ಪಿಎಸ್‌ಐ ಆಗಿ ಚಂದ್ರಶೇಖರ

0

ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣೆಯ ಸಂಚಾರ ವಿಭಾಗದ ಪಿಎಸ್‌ಐ ಆಗಿ ಚಂದ್ರಶೇಖರ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಮೂಲತಃ ಪುತ್ತೂರಿನ ಕರ್ಮಲ ನಿವಾಸಿಯಾಗಿರುವ ಇವರು ಪೊಲೀಸ್ ಕಾನ್ಸ್‌ಸ್ಟೇಬಲ್ ಆಗಿ ಪೊಲೀಸ್ ಇಲಾಖೆಗೆ ಸೇರಿದ್ದು, ಮೊದಲಿಗೆ ಕೋಟ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕದ ದಿನಗಳಲ್ಲಿ ಹೆಡ್ ಕಾನ್ಸ್‌ಸ್ಟೇಬಲ್ ಆಗಿ ಬಡ್ತಿ ಹೊಂದಿ, ಮಂಗಳೂರು ಸಂಚಾರಿ ಠಾಣೆ ಸೇರಿದಂತೆ ಇನ್ನಿತರ ಕಡೆ ಕರ್ತವ್ಯ ನಿರ್ವಹಿಸಿದ್ದರು. ಎಎಸ್‌ಐ ಆಗಿ ಭಡ್ತಿ ಹೊಂದಿ ಸುಳ್ಯ ಠಾಣೆ ಸೇರಿದಂತೆ ಇನ್ನಿತರ ಕಡೆ ಕರ್ತವ್ಯ ನಿರ್ವಹಿಸಿದ ಇವರು ಪಿಎಸ್‌ಐ ಆಗಿ ಭಡ್ತಿ ಹೊಂದಿ ಬಣಕಲ್, ದ.ಕ. ಜಿಲ್ಲೆಯ ಪೂಂಜಾಲಕಟ್ಟೆ, ವೇಣೂರು ಹಾಗೂ ಅರಣ್ಯ ಸಂಚಾರಿ ದಳ, ಧರ್ಮಸ್ಥಳದಲ್ಲಿ ಸೇವೆ ಸಲ್ಲಿಸಿ ಉಪ್ಪಿನಂಗಡಿಗೆ ವರ್ಗಾವಣೆಗೊಂಡಿದ್ದಾರೆ.

LEAVE A REPLY

Please enter your comment!
Please enter your name here