ಜೂ.24: ಮುಸ್ಲಿಂ ಸಮುದಾಯ ಒಕ್ಕೂಟದಿಂದ ಸ್ಪೀಕರ್ ಯು.ಟಿ ಖಾದರ್, ಶಾಸಕ ಅಶೋಕ್ ಕುಮಾರ್‌ ರವರಿಗೆ ನಾಗರಿಕ ಸನ್ಮಾನ

0

ಪುತ್ತೂರು:ಮುಸ್ಲಿಂ ಸಮುದಾಯ ಒಕ್ಕೂಟ ಪುತ್ತೂರು ಇದರ ವತಿಯಿಂದ ರಾಜ್ಯ ಸರಕಾರದ ನೂತನ ಸ್ಪೀಕರ್ ಆಗಿ ಆಯ್ಕೆಯಾದ ಉಳ್ಳಾಲ ಶಾಸಕ ಯು.ಟಿ ಖಾದರ್ ಹಾಗೂ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮಗಳು ಜೂ.24ರಂದು ಪುತ್ತೂರು ಪುರಭವನದಲ್ಲಿ ನಡೆಯಲಿದೆ ಎಂದು ಒಕ್ಕೂಟದ ಕಾರ್ಯಕ್ರಮ ನಿರ್ದೇಶಕ ಸಿನಾನ್ ಪರ್ಲಡ್ಕ ಹೇಳಿದರು.


ಜೂ.22ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಕೇಂದ್ರ ಜುಮ್ಮಾ ಮಸೀದಿಯ ಮುದರ್ರಿಸ್ ಅಹ್ಮದ್ ಪೂಕೋಯ ತಂಙಲ್ ಉದ್ಘಾಟಿಸಲಿದ್ದಾರೆ. ನಗರ ಸಭಾ ಸದಸ್ಯ ಮಹಮ್ಮದ್ ರಿಯಾಜ್ ಪರ್ಲಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮಂಜೇಶ್ವರ ಶಾಸಕ ವಿ.ಕೆ.ಎಂ ಅಶ್ರಫ್, ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್‌ನ ಸಂಚಾಲಕ ಡಾ. ಬಶೀರ್ ಅಹ್ಮದ್ ಹಾಗೂ ಎಲ್ಲಾ ಜಮಾಅತ್‌ನ ಅಧ್ಯಕ್ಷರು ಅತಿಥಿಗಳಾಗಿ ಆಗಮಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಪುತ್ತೂರಿನ ಎಲ್ಲಾ ಮಸೀದಿ ಸಮಿತಿಗಳಿಗೆ, ಎಲ್ಲಾ ಸಂಘ ಸಂಸ್ಥೆಗಳಿಗೆ ಸನ್ಮಾನಿಸಲು ಅವಕಾಶ ಕಲ್ಪಿಸಲಾಗಿದೆ. ಶರೀಫ್ ಬಲ್ನಾಡು, ಸಿದ್ದೀಕ್ ಸುಲ್ತಾನ್ ಹಾಗೂ ರಶೀದ್ ಪರ್ಲಡ್ಕ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here