ವಿವೇಕಾನಂದ ಕನ್ನಡ ಶಾಲೆಯಲ್ಲಿ ‘ಸಹಜ’-ಮೂಲಿಕಾ ವನ ನಿರ್ಮಾಣ ಯೋಜನೆ

0

ಔಷಧೀಯ ಸಸ್ಯಗಳ ಸಂರಕ್ಷಣೆ ಹಾಗೂ ಬಳಕೆಯ ಅರಿವು ಶಾಲಾ ದಿನಗಳಿಂದಲೇ ಬೆಳೆಸುವ ಶಾಲಾ ಕಾರ್ಯ ಶ್ಲಾಘನೀಯ – ಡಾ.ಹರಿಕೃಷ್ಣ ಪಾಣಾಜೆ


ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಮಹತ್ವಾಕಾಂಕ್ಷೆಯ ಯೋಜನೆ ‘ವಿವೇಕ ಸಂಜೀವಿನಿ’ ಯ [ಔಷಧೀಯ ಸಸ್ಯಗಳ ಸಂರಕ್ಷಣೆ, ಸಂವರ್ಧನೆ, ಬಳಕೆ ಹಾಗೂ ಜಾಗೃತಿಯ ಆಂದೋಲನ] ಆಶಯದಂತೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ‘ಸಹಜ- ಮೂಲಿಕಾ ವನ ನಿರ್ಮಾಣ ಯೋಜನೆ’ಯ ಕಾರ್ಯಕ್ರಮ ನಡೆಯಿತು.

ಶ್ರೀ ದುರ್ಗಾ ಕ್ಲಿನಿಕ್ ಪುತ್ತೂರು ಇಲ್ಲಿನ ಆರ್ಯುವೇದಿಕ್ ವೈದ್ಯ ಡಾ.ಹರಿಕೃಷ್ಣ ಪಾಣಾಜೆ ಉದ್ಫಾಟಿಸಿ ಮಾತಾನಾಡಿ ‘ಔಷಧೀಯ ಸಸ್ಯಗಳ ಸಂರಕ್ಷಣೆ ಹಾಗೂ ಬಳಕೆಯ ಅರಿವು ಶಾಲಾ ದಿನಗಳಿಂದಲೇ ಬೆಳೆಸುವ ಕಾರ್ಯ ಶ್ಲಾಘನೀಯವಾಗಿದೆ. ಈಗ ಬೆಳೆಸಿಕೊಳ್ಳುವ ಈ ರೀತಿಯ ಅಭ್ಯಾಸಗಳನ್ನು ನೀವು ಬದುಕಿನಲ್ಲಿ ಮುಂದುವರಿಸುವ ಅಗತ್ಯ ಪ್ರಯತ್ನ ಮಾಡಬೇಕು ಮತ್ತು ಸಹಜ- ಸರಳ ಪ್ರಾದೇಶಿಕ ಆಹಾರ ವಸ್ತುಗಳ ಬಗ್ಗೆ ಒಲವು ತೋರಿಸಬೇಕು’ ಎಂದರು.

ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ಚಂದ್ರ , ಆಡಳಿತ ಮಂಡಳಿ ಸದಸ್ಯ ವೀಣಾ ನಾಗೇಶ್ ತಂತ್ರಿ, ಮುಖ್ಯಗುರು ನಳಿನಿ ಉಪಸ್ಥಿತರಿದ್ದರು. ಮಕ್ಕಳು ನೆಟ್ಟ ಗಿಡಗಳಿಗೆ ನೀರುಣಿಸುವ ಹಾಗೂ ಪೋಷಿಸುವ ಹಂತಗಳ ಬಗ್ಗೆ ಸಹ-ಸಂಜೀವಿನಿಯ ಸಂಯೋಜಕಿ ಶ್ವೇತಾ, ಸ್ವಾತಿ ವೀಣಾ ಸರಸ್ವತಿ ಮಾಹಿತಿ ನೀಡಿದರು. ಶಾಲಾ ಶಿಕ್ಷಕರು, ಮಕ್ಕಳು, ಹಾಗೂ ಶಾಲಾ ಸಹಜ- ಸಂಜೀವಿನಿ ಸಮಿತಿಯ ಸದಸ್ಯರ ಉಪಸ್ಥಿತರಿದ್ದರು.ಸ್ವಾತಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here