ಪರ್ಪುಂಜ: ಒಳಮೊಗ್ರು ಒಕ್ಕೂಟದ ತ್ರೈಮಾಸಿಕ ಸಭೆ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಪುತ್ತೂರು ಇದರ ಒಳಮೊಗ್ರು ಒಕ್ಕೂಟದ ತ್ರೈಮಾಸಿಕ ಸಭೆಯು ಪರ್ಪುಂಜ ಶಾಲೆಯಲ್ಲಿ ಒಕ್ಕೂಟದ ಅಧ್ಯಕ್ಷ ಗೋವಿಂದ ನಾಯ್ಕರವರ ಅಧ್ಯಕ್ಷತೆಯಲ್ಲಿ ನಡೆಯಿತು.

ನೊಡೆಲ್ ಅಧಿಕಾರಿ ಜೀವನ್‌ರವರು ಯೋಜನೆಯ ಮಾಹಿತಿ ನೀಡಿದರು. ಸೇವಾ ಪ್ರತಿನಿಧಿ ಸವಿತಾ ಎಸ್‌ರವರು ವಾರದ ಸಭೆ ಮತ್ತು ಯೋಜನೆಯ ಮಾಹಿತಿ ನೀಡಿದರು. ಒಕ್ಕೂಟದ ಉಪಾಧ್ಯಕ್ಷ ಸುರೇಶ್ ನಾಯಕ್, ಕಾರ್ಯದರ್ಶಿ ಅಂಕಿತ, ಜತೆ ಕಾರ್ಯದರ್ಶಿ ಚೆನ್ನಪ್ಪ ಎಮ್ ಮರಿಕೆ, ಕೋಶಾಧಿಕಾರಿ ಜಮೀಲಾ ಉಪಸ್ಥಿತರಿದ್ದರು.
ದಾಖಲಾತಿ ಸಮಿತಿ ಸದಸ್ಯೆ ಉಷಾ, ಸುನೀತಾರವರು ದಾಖಲಾತಿ ಪರಿಶೀಲಿಸಿದರು. ಯಶೋಧ ಸ್ವಾಗತಿಸಿ, ಅಂಕಿತ ವಂದಿಸಿದರು. ಅಂಕಿತಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here