ಪುತ್ತೂರು ಟೈಲರ್ ಎಸೋಸಿಯೇಶನ್ ಕ್ಷೇತ್ರ ಸಮಿತಿ ಸಾಮಾನ್ಯ ಸಭೆ

0

ಪುತ್ತೂರು: ಟೈಲರ್ ಅಸೋಸಿಯೇಶನ್ ಪುತ್ತೂರು ಕ್ಷೇತ್ರ ಸಮಿತಿಯ ಸಾಮಾನ್ಯ ಸಭೆಯು ಕ್ಷೇತ್ರ ಸಮಿತಿ ಅಧ್ಯಕ್ಷ ಜಯರಾಮ್ ಬಿ ಯನ್ ಇವರ ಅಧ್ಯಕ್ಷತೆಯಲ್ಲಿ ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ಜರಗಿತು. ಇತ್ತೀಚೆಗೆ ಅನಾರೋಗ್ಯದಿಂದ ನಿಧನ ಹೊಂದಿದ ನರಿಮೊಗರು ವಲಯದ ಸದಸ್ಯರಾದ ಜತ್ತಪ್ಪ ಗೌಡ ಇವರಿಗೆ ಕ್ಷೇತ್ರ ಸಮಿತಿ ವತಿಯಿಂದ ಶೃದ್ದಾಂಜಲಿ ಸಲ್ಲಿಸಲಾಯಿತು. ಕ್ಷೇತ್ರ ಸಮಿತಿ ರಚನೆಯಾಗಿ 2 ವರ್ಷ ಪೂರೈಸಿರುವುದರಿಂದ ಕ್ಷೇತ್ರ ಸಮಿತಿಯ ಮಹಾಸಭೆಯನ್ನು ಜು. 30ರಂದು ನಡೆಸುವುದೆಂದು ತೀರ್ಮಾನಿಸಲಾಯಿತು. ಟೈಲರ್ ಅಸೋಸಿಯೇಶನ್ ಸದಸ್ಯರಾಗಲು ಟೈಲರ್ ವೃತ್ತಿ ಬಾಂಧವರಿಗೆ ಸಮಿತಿಯಿಂದ ಮನವಿ ಮಾಡಲಾಯಿತು. ಸದಸ್ಯರು ಸದಸ್ಯತನ ರಿನಿವಲ್ ಮಾಡಲು ತಿಳಿಸಲಾಯಿತು. ವಾರ್ಷಿಕ ಚಟುವಟಿಕೆಯ ಬಗ್ಗೆ ಮುಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸದಸ್ಯರಿಗೆ ತಿಳಿಸಲಾಯಿತು. ಕೋಶಾಧಿಕಾರಿ ಸುಜಾತ, ಜಿಲ್ಲಾಧ್ಯಕ್ಷ ಜಯಂತ ಉರ್ಲಾಂಡಿ, ಜಿಲ್ಲಾ ಸದಸ್ಯರಾದ ವಿಶ್ವನಾಥ್ ರೈ ಕುಂಬ್ರ ಚಿತ್ರಾ ಕುಂಬ್ರ, ನಗರ ವಲಯ ಅಧ್ಯಕ್ಷ ದಿನೇಶ್ ಸಂಪ್ಯ,‌ ನಿಕಟ ಪೂರ್ವ ಅಧ್ಯಕ್ಷ ಯಶೋಧರ ಜೈನ್,ರಮೇಶ್ ಕೆಮ್ಮಾಯಿ, ವನಿತಾ, ಪವಿತ್ರಾ, ನರಿಮೊಗರು ವಲಯದ ಆನಂದ ದಂಡ್ಯನಕುಕ್ಕು,ಜಯಲಕ್ಷ್ಮಿ ,ಕುಂಬ್ರ ವಲಯದ ಆನಂದ ರೈ,ಸವಣೂರು ವಲಯದ ಜಗನ್ನಾಥ, ಯಶೋದ,ಉಪ್ಪಿನಂಗಡಿ ವಲಯದ ಸುಜಾತ ಕೃಷ್ಣ,ಜಯಶ್ರೀ ಆಚಾರ್ಯ, ಈಶ್ವರಮಂಗಲ ವಲಯದ ರೇವತಿ, ಗಣೇಶ್, ಸೀತಾರಾಮ, ಪುಣಚ ವಲಯದ ನಿರ್ಮಲ ಉಪಸ್ಥಿತರಿದ್ದರು. ಕಾರ್ಯದರ್ಶಿ ಉಮಾ ಯು ನಾಯ್ಕ್ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here