ಜನಾಆಶಾ ಸೌತ್ ನಿಧಿ ಅಮಿಟೆಡ್ ಶಾಖೆ ಶುಭಾರಂಭ

0

ಪುತ್ತೂರು: ಮೈಸೂರಿನಲ್ಲಿ ಪ್ರಧಾನ ಕಚೇರಿ ಹಾಗೂ ರಾಜ್ಯದಲ್ಲಿ 20 ಶಾಖೆಗಳನ್ನೂ ಹೊಂದಿರುವಂಥ, ದ.ಕ ಜಿಲ್ಲೆಯ ಮೂಡುಬಿದಿರೆ ಹಾಗೂ ಪುತ್ತೂರಿನ ದರ್ಬೆ ಮೊಯಿದ್ದಿನ್ ಸಂಕೀರ್ಣ ಇಲ್ಲಿ ಕಳೆದ ಒಂದು ವರುಷಗಳಿಂದ ಔಟ್ ಲೇಟ್ ಹೊಂದಿದ್ದಂತಹ ಜನಾಆಶಾ ಸೌತ್ ನಿಧಿ ಲಿ. ಇದೀಗ ವಿಸ್ತಾರಗೊಂಡು ಮುಖ್ಯರಸ್ತೆ ಶಿವ ಆರ್ಕೆಡ್ ನ ಮಹಡಿಯಲ್ಲಿ ಜೂ.29 ರಂದು ಉದ್ಘಾಟನೆಗೊಂಡಿತು.

ಸಂಸ್ಥೆಯ ನಿರ್ದೇಶಕರಾದ ಗಿರೀಶ್ ಆಲೂರು, ದೀಪ ಪ್ರಜ್ವಲನೆ ಮೂಲಕ ನೂತನ ಕಛೇರಿ ಉದ್ಘಾಟನೆ ಮಾಡಿ ಮಾತನಾಡಿ, ಜನತೆಗೆ ಉತ್ತಮ ರೀತಿಯ ಸೇವೆ ಒದಗಿಸೋ ಮೂಲಕ ಇನ್ನಷ್ಟೂ ಅಭಿವೃದ್ಧಿ ಕಾಣಲಿಯೆಂದು ಹಾರೈಸಿದರು.

ರೀಜನಲ್ ಮ್ಯಾನೇಜರ್ ಎಸ್.ಶಿವಣ್ಣ, ಚೆಲುವಕೃಷ್ಣಮೂರ್ತಿ ಡಿ, ಜೋಸೆಫ್ ಸಿ, ಶಿವಕುಮಾರ್ ಜಿ.ಎ, ವೀಣಾಕಿರಣ್ ಬಿ, ಸುಬ್ರಹ್ಮಣ್ಯ ಬಂಟ್ವಾಳ, ಜಲಜ ಹಾಗೂ ವಿಶ್ವನಾಥ್‌ ಗೌಡ ಮೂಡಬಿದಿರೆ ಸಹಿತ ಹಲವೂ ಅತಿಥಿಗಳು ಹಾಜರಿದ್ದರು.
ಎಲ್ಲಾ ರೀತಿಯ ವ್ಯವಹಾರಕ್ಕೂ ಸಂಸ್ಥೆ ಮೂಲಕ ಸಾಲ ಸೌಲಭ್ಯ ವ್ಯವಸ್ಥೆಯೂ ಸರಳ ಕಾಗದ ಪತ್ರಗಳ ಮೂಲಕ ತ್ವರಿತವಾಗಿ ನಡೆಯಲಿದ್ದು,
ಉಳಿತಾಯ ಖಾತೆ, ಡೈಲಿ ಡಿಪಾಸಿಟ್, ಆರ್.ಡಿ.ಡಿಪಾಸಿಟ್, ಎಫ್.ಡಿ.ಡಿಪಾಸಿಟ್, ವ್ಯಾಪಾರ ಸಾಲ ಹಾಗೂ ಡಿಪಾಸಿಟ್ ಬಾಂಡ್ ಮೇಲೂ ಸಾಲ ಸೌಲಭ್ಯ ಸೇವೆಗಳೂ ಸಿಗಲಿದ್ದು, ಎಲ್ಲರೂ ಸಹಕಾರ ನೀಡುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಇನ್ನೂ ಹೆಚ್ಚು ವಿವರಗಳಿಗಾಗಿ ಮೊಬೈಲ್ ಸಂಖ್ಯೆ 9844846815 ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here