ಕೂಡುರಸ್ತೆ: ರಿಫಾಯಿಯ್ಯ ಓಲ್ಡ್ ಸ್ಟೂಡೆಂಟ್ ವತಿಯಿಂದ ಮಸೀದಿಗೆ ಮಯ್ಯಿತ್ ಪರಿಪಾಲನಾ ಟೆಂಟ್ ಹಸ್ತಾಂತರ

0

ಪುತ್ತೂರು: ರಿಫಾಯಿಯ್ಯ ಜುಮಾ ಮಸೀದಿ ಕೂಡುರಸ್ತೆ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಹಳೆ ವಿದ್ಯಾರ್ಥಿ ಸಂಘಟನೆಯಾದ ರಿಫಾಯಿಯ್ಯ ಓಲ್ಡ್ ಸ್ಟೂಡೆಂಟ್ ಎಸೋಸಿಯೇಶನ್ ವತಿಯಿಂದ ಮಸೀದಿಗೆ ಮಯ್ಯಿತ್ ಪರಿಪಾಲನಾ ಟೆಂಟ್ ಹಸ್ತಾಂತರಿಸಲಾಯಿತು.

ಜಮಾಅತ್ ಖತೀಬ್ ಬದ್ರುದ್ದೀನ್ ರಹ್ಮಾನಿ ಮಾತನಾಡಿ ಟೆಂಟ್ ನೀಡಿದ ಸಂಘಟನೆಯ ಪದಾಧಿಕಾರಿಗಳಿಗೆ ಅಭಿನಂದಿಸಿದರು. ಈ ಸಂದರ್ಭದಲ್ಲಿ ಜಮಾಅತ್ ಗೌರವಾದ್ಯಕ್ಷರಾದ ಮಾಹಿನ್ ಹಾಜಿ ಬಾಳಾಯ, ಅದ್ಯಕ್ಷ ಉಮರ್ ಅಝ್ಹರಿ, ಉಪಾದ್ಯಕ್ಷ ಉಮರ್ ಬಾಳಾಯ, ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಸುಲ್ತಾನ್, ಕಾರ್ಯದರ್ಶಿ ಇಬ್ರಾಹಿಂ ಮುಸ್ಲಿಯಾರ್, ಕೋಶಾಧಿಕಾರಿ ಹನೀಫ್, ಪಿ.ಕೆ ಮಹಮ್ಮದ್, ಮಜೀದ್ ಬಾಳಾಯ, ಶರೀಫ್ ಎಲಿಯ, ರಿಫಾಯಿಯ್ಯ ಓಲ್ಡ್ ಸ್ಟೂಡೆಂಟ್ ಅಧ್ಯಕ್ಷ ಸಾದಿಕ್ ಬಾಳಾಯ, ಪ್ರಧಾನ ಕಾರ್ಯದರ್ಶಿ ನೌಫಲ್ ಅಜ್ಜಿಕಲ್ಲು, ಎ ಆರ್ ನೌಫಲ್, ನಾಸಿರ್, ಆಶಿಕ್, ಹನೀಫ್, ಆರಿಫ್, ಮಿದ್ಲಾಜ್, ಆರಿಫ್, ತಮೀಮ್, ನಿಝಾಂ, ರಹಿಮಾನ್, ಸಫ್ವಾನ್ ಹಾಗೂ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here