ಪಾಣಾಜೆ: ಎಸ್ ಎಸ್ ಎಲ್ ಸಿ 1979ನೇ ಸಾಲಿನ ಹೆಮ್ಮೆಯ ಪ್ರತಿಭಾನ್ವಿತ ಹಿರಿಯ ವಿದ್ಯಾರ್ಥಿ, ವಿದ್ಯಾಭಿಮಾನಿ, ಕೊಡುಗೈದಾನಿ, ಮುಂಬೈಯಲ್ಲಿ ಉದ್ಯಮಿಯಾಗಿರುವ ಕೃಷ್ಣರಾಜ ಮಣ್ಣಂಗಳ ಅವರು ತಾನು ವಿದ್ಯಾರ್ಜನೆ ಮಾಡಿದ, ಪಾಣಾಜೆ ಸುಬೋಧ ಪ್ರೌಢಶಾಲೆಗೆ, ರೂ 1,55,000(ಒಂದು ಲಕ್ಷದ ಐವತ್ತಐದು ಸಾವಿರ) ಮೌಲ್ಯದ ಉತ್ತಮ ದರ್ಜೆಯ ಮೈಕ್ ಸೆಟ್ ಹಾಗೂ ಅದರ ಬಿಡಿ ಭಾಗಗಳನ್ನು ಕೊಡುಗೆಯಾಗಿ ನೀಡಿರುತ್ತಾರೆ.
ಕ್ರೀಡಾಭಿಮಾನಿಯಾದ ಅವರು ನಾಲ್ಕು ವರ್ಷಗಳ ಹಿಂದೆ ಶಾಲೆಗೆ ಟೇಬಲ್ ಟೆನ್ನಿಸ್ ಸೆಟ್, ಎರಡು ಕೇರಂ ಸೆಟ್ ಹಾಗೂ ಇತರ ಕ್ರೀಡೋಪಕರಣಗಳು ಮತ್ತು ನಗದು ಹಣವನ್ನು ಶಾಲೆಗೆ ಉದಾರವಾಗಿ ನೀಡಿದ್ದರು ಎಂದು ಶಾಲಾ ಸಂಚಾಲಕರಾದ ಗಿಳಿಯಾಲು ಮಹಾಬಲೇಶ್ವರ ಭಟ್ ತಿಳಿಸಿದ್ದಾರೆ.
![](https://puttur.suddinews.com/wp-content/uploads/2023/06/d2d03e5c-439c-4ecd-b39c-b462acbf0b8f.jpg)