ಮುಂಡೂರು: ಕಲ್ಲಗುಡ್ಡೆ ಸಮೃದ್ಧಿ ಸಂಕೀರ್ಣದಲ್ಲಿ ಗೃಹಜ್ಯೋತಿ ಉಚಿತ ನೊಂದಾವಣಾ ಕಚೇರಿ ಪ್ರಾರಂಭ

0

ಪುತ್ತೂರು: ರಾಜ್ಯ ಸರಕಾರದ ಉಚಿತ ಯೋಜನೆಗಳಲ್ಲೊಂದಾದ ಗೃಹಜ್ಯೋತಿ ಉಚಿತ ನೊಂದಾವಣಾ ಕಚೇರಿ ಮುಂಡೂರು ಗ್ರಾ.ಪಂ ವ್ಯಾಪ್ತಿಯ ಕೆಮ್ಮಿಂಜೆ ವಾರ್ಡ್‌ನ ಕಲ್ಲಗುಡ್ಡೆ ಸಮೃದ್ಧಿ ಸಂಕೀರ್ಣದಲ್ಲಿ ಪ್ರಾರಂಭಗೊಂಡಿದೆ.
ಮುಂಡೂರು ಗ್ರಾ.ಪಂ ಸದಸ್ಯೆ ದೀಪಿಕಾ, ಸ್ಥಳೀಯರಾದ ಮನೋಜ್ ಯಾದವ್, ದಿನೇಶ್ ಕೋಲಾಡಿ, ಕಾಂಗ್ರೆಸ್ ಮುಖಂಡ ಚಂದ್ರಶೇಖರ್ ಕಲ್ಲಗುಡ್ಡೆ ಉಪಸ್ಥಿತರಿದ್ದರು.
ಶಾಸಕ ಅಶೋಕ್ ಕುಮಾರ್ ರೈ ಅವರ ಮಾರ್ಗದರ್ಶನದಲ್ಲಿ ನೊಂದಾವಣಾ ಕಚೇರಿ ಪ್ರಾರಂಭಿಸಿದ್ದು, ಇದರ ಸದುಪಯೋಗವನ್ನು ಫಲಾನುಭವಿಗಳು ಪಡೆದುಕೊಳ್ಳುವಂತೆ ಗ್ರಾ.ಪಂ ಸ್ಥಳೀಯ ವಾರ್ಡ್ ಸದಸ್ಯೆ ದೀಪಿಕಾ ಹಾಗೂ ಕಾಂಗ್ರೆಸ್ ಮುಖಂಡ ಚಂದ್ರಶೇಖರ್ ಕಲ್ಲಗುಡ್ಡೆ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here