ಸಿಂಹವನ ಮರ ಬಿದ್ದು ಹಾನಿಗೊಳಗಾದ ಮನೆಗಳಿಗೆ ಶಾಸಕ ಅಶೋಕ್‌ ಕುಮಾರ್‌ ರೈ ಭೇಟಿ

0

ಆತಂಕ ಬೇಡ ನಿಮ್ಮ ಜೊತೆ ನಾನಿದ್ದೇನೆ; ಶಾಸಕರ ಭರವಸೆ
ಪುತ್ತೂರು: ಕಳೆದ ಮೂರು ದಿನಗಳ ಹಿಂದೆ ಮರ ಬಿದ್ದು ಹಾನಿಗೊಳಗಾಗಿದ್ದ ಆರ್ಯಾಪು ಗ್ರಾಮದ ಸಿಂಹವನ ನಿವಾಸಿ ಮಲ್ಲು ಅವರ ಮನೆಗೆ ಶಾಸಕರಾದ ಅಶೋಕ್ ರೈ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮರ ಬಿದ್ದು ಹಾನಿಗೊಳಗಾದ ಮನೆಯನ್ನು ಅಶೋಕ್ ರೈ ಅಭಿಮಾನಿ ಬಳಗದ ವತಿಯಿಂದ ದುರಸ್ಥಿ ಮಾಡಲಾಗಿತ್ತು. ಜು. 9 ರಂದು ಮನೆಗೆ ಭೇಟಿ ನೀಡಿದ ಶಾಸಕರು ಒಡೆದು ಹೋದ ನಿಮ್ಮ ಮನೆ ದುರಸ್ಥಿಗೆ ಸರಕಾರದಿಂದ ನೆರವು ದೊರೆಯಲಿದ್ದು ನಿಮ್ಮ ಖಾತೆಗೆ ಹಣ ಜಮಾವಣೆಯಾದ ಬಳಿಕ ನೀವು ಮನೆಯನ್ನು ನವೀಕರಣ ಮಾಡಿಸಿಕೊಳ್ಳಿ. ನೀವು ಯಾವುದೇ ಆತಂಕ ಪಡುವುದು ಬೇಡ ನಿಮ್ಮ ಜೊತೆ ನಾನಿದ್ದೇನೆ ಧೈರ್ಯವಾಗಿರಿ ಎಂದು ಕುಟುಂಬಕ್ಕೆ ಭರವಸೆ ನೀಡಿದರು. ಈ ಸಂಧರ್ಭದಲ್ಲಿ ಇಂಟಕ್ ಅಧ್ಯಕ್ಷರಾದ ಜಯಪ್ರಕಾಶ್ ಬದಿನಾರ್, ಸಿಂಹವನ ಬೂತ್ ಅಧ್ಯಕ್ಷರಾದ ದೇವರಾಜ ಸಿಂಹವನ,ತೀರ್ಥಲತಾ ಸಿಂಹವನ, ಸಾವಿತ್ರಿ ಸಿಂಹವನ, ಬಾಬುರಜ್ ಸಿಂಹವನ, ಮಣಿ ಸಿಂಹವನ, ಉಮಾವತಿ ಸಿಂಹವನ, ನಳಿನಿ ಮತ್ತು ಆನಂದ ಸಿಂಹವನ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here