ವೈವಿಧ್ಯ ಇಂಟೀರಿಯರ್ಸ್ 2ನೇ ವರ್ಷಕ್ಕೆ ಪಾದಾರ್ಪಣೆ, ಗಣಪತಿ ಹೋಮ

0

ವೈವಿಧ್ಯ ಇಂಟೀರಿಯರ್ಸ್ ಎರಡನೇ ವರ್ಷಕ್ಕೆ ಪಾದಾರ್ಪಣೆ, ಗಣಪತಿ ಹೋಮ
ಪುತ್ತೂರು: ನಗರದ ಅರುಣಾ ಥಿಯೇಟರ್ ಎದುರಿನ ಪ್ರಭು ಬಿಲ್ಡಿಂಗ್‌ನಲ್ಲಿ ಕಾರ್ಯಾಚರಿಸುತ್ತಿರುವ ವೈವಿಧ್ಯ ಇಂಟೀರಿಯರ್ಸ್ ಜು.೮ರಂದು ಎರಡನೇ ವರ್ಷಕ್ಕೆ ಪಾದಾರ್ಪಣೆಗೊಂಡಿತು. ಪಾದಾರ್ಪಣೆ ಪ್ರಯುಕ್ತ ಬೆಳಿಗ್ಗೆ ಸಂಸ್ಥೆಯಲ್ಲಿ ಗಣಪತಿ ಹೋಮ ನಡೆಯಿತು. ಕಳೆದ ಒಂದು ವರ್ಷದಿಂದ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದ್ದು, ಸಂಸ್ಥೆಯು ಮನೆ ಮತ್ತು ವಾಣಿಜ್ಯ ಮಳಿಗೆಗಳ ಒಳಾಂಗಣ ವಿನ್ಯಾಸದಲ್ಲಿ ವೈವಿಧ್ಯತೆಗೆ ಹೆಸರುವಾಸಿಯಾಗಿದೆ. ಅಲ್ಲದೆ ಇಸ್ಕಾ ಮಾರ್ಬಲ್ ಶೀಟ್, ಡಬ್ಲ್ಯೂಪಿಸಿ ರಾಫ್ಟರ್ ಲೂವರ್ಸ್, ಪೋಮ್ ಶೀಟ್, ಪಿವಿಸಿ ಡೆಕೋರೇಟಿವ್, ವಾಲ್ ಮತ್ತು ಸೀಲಿಂಗ್ ಪ್ಯಾನಲ್ಸ್, ಎಚ್‌ವಿಎಲ್‌ಎಸ್ ಹೆಲಿಕಾಪ್ಟರ್ ಫ್ಯಾನ್ಸ್‌ಗಳ ದಕ್ಷಿಣ ಕನ್ನಡ ಜಿಲ್ಲೆಯ ಅಧಿಕೃತ ವಿತರಕರಾಗಿದ್ದಾರೆ.

ಈ ಸಂದರ್ಭದಲ್ಲಿ ಮಾಲಕರ ಸಹೋದರರಾದ ಕಿಶೋರ್ ಬೇರಿಕೆ, ಗಣೇಶ್ ಬೇರಿಕೆ, ಮಾಲಕರು ನ್ಯೂ ಅಶ್ವಿನಿ ಉಪ್ಪಿನಂಗಡಿ, ತಾಯಿ ಹೊನ್ನಮ್ಮ, ವಾಸುದೇವ ಗೌಡ ಬೇರಿಕೆ, ಗುರುರಾಜ್ ಬೇರಿಕೆ, ದೀಪ್ತಿ ಅಭಿಷೇಕ್, ಮೀರಾ ಪುಂಚತ್ತಾರು, ಲಕ್ಷಣ ಪುಂಚತ್ತಾರು, ಅಶ್ವಿನಿ ಎಂಟರ್ ಪ್ರೈಸಸ್ ಮಾಲಕ ಆಕಾಶ್, ಪ್ರಭು ಬಿಲ್ಡಿಂಗ್ ಮಾಲಕ ನಾಗೇಶ್ ಪ್ರಭು, ರಾಘವೇಂದ್ರ ನಾಯಕ್, ಮಹಾಲಕ್ಷಿ ಪ್ಲೈವುಡ್ ಮಾಲಕ ಪುನೀತ್, ಬಾಟ ಶೋ ರೂಂ ಮಾಲಕ ಪ್ರಸನ್ನ, ಸೌಮ್ಯ ಪ್ರಸನ್ನ ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕ ಯಶೋಧ್ ಕುಮಾರ್, ಪತ್ನಿ ನಿರ್ಮಲ ಯಶೋಧ್ ಕುಮಾರ್, ಪುತ್ರಿಯರಾದ ತನ್ವಿ ಯಶೋಧ್ ಕುಮಾರ್, ತಾನ್ಯಾ ಯಶೋಧ್ ಕುಮಾರ್ ಅತಿಥಿಗಳನ್ನು ಸ್ವಾಗತಿಸಿದರು. ವಿವಿಧ ಗಣ್ಯರು ಆಗಮಿಸಿ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here