ಜಿ.ಪಂ. ಮಾಜಿ ಸದಸ್ಯೆ ಬೆಳ್ಳಿಪ್ಪಾಡಿ ಉರಮಾಲ್ ಪಾವನಾ ಜೆ.ಶೆಟ್ಟಿ ನಿಧನ

0

ಪುತ್ತೂರು: ಬೆಳ್ಳಿಪ್ಪಾಡಿ ಉರಮಾಲ್ ದಿ.ರಾಮಕೃಷ್ಣ ರೈಯವರ ಪುತ್ರಿ ದ.ಕ. ಜಿಲ್ಲಾ ಪಂಚಾಯತ್‌ನ ಬಜಪೆ ಕ್ಷೇತ್ರದ ಮಾಜಿ ಸದಸ್ಯೆ ಪಾವನಾ ಜೆ.ಶೆಟ್ಟಿ(68ವ)ರವರು ಜು.11ರಂದು ಮುಂಬೈಯಲ್ಲಿರುವ ಪುತ್ರ ಡಾ.ವಚನ್ ಶೆಟ್ಟಿಯವರ ಮನೆಯಲ್ಲಿ ನಿಧನರಾದರು.
ಮೃತರು ಪತಿ ಜೀವನ್‌ದಾಸ್ ಶೆಟ್ಟಿ, ಪುತ್ರರಾದ ಡಾ.ವಚನ್ ಶೆಟ್ಟಿ, ಅಬುದಾಬಿಯಲ್ಲಿ ಉದ್ಯಮಿಯಾಗಿರುವ ಸಜನ್ ಶೆಟ್ಟಿ, ಮೂವರು ಸಹೋದರಿಯರು, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಪಾವನಾ ಜೆ.ಶೆಟ್ಟಿರವರು ಹಲವಾರು ಧಾರ್ಮಿಕ ಕೇಂದ್ರಗಳಿಗೆ ಕೊಡುಗೆಯನ್ನು ನೀಡಿ, ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗಿದ್ದರು.

LEAVE A REPLY

Please enter your comment!
Please enter your name here