ಬಜತ್ತೂರು: ಚಿಕಿತ್ಸಾ ವೆಚ್ಚಕ್ಕೆ ಬಿಜೆಪಿ ನೆರವು

0

ಉಪ್ಪಿನಂಗಡಿ: ಇಲ್ಲಿನ ಪೆರಿಯಡ್ಕ ಎಂಬಲ್ಲಿ ರಸ್ತೆ ಅಪಘಾತವಾಗಿ ಗಾಯಗೊಂಡಿರುವ ಬಜತ್ತೂರು ಗ್ರಾಮದ ಆಲಾಜೆ ನಿವಾಸಿಗಳಾದ ದಮಯಂತಿ ಮತ್ತು ಅವರ ಮಕ್ಕಳಾದ ಮೋನಿಷಾ ಹಾಗೂ ಸಮಿತ ಇವರ ಚಿಕಿತ್ಸಾ ವೆಚ್ಚಕ್ಕೆ ಬಜತ್ತೂರು ಗ್ರಾಮದ ಹೊಸಗದ್ದೆ ಬಿಜೆಪಿ ಬೂತ್ ಸಮಿತಿ ವತಿಯಿಂದ 30 ಸಾವಿರ ರೂಪಾಯಿ ಧನ ಸಹಾಯವನ್ನು ನೀಡಲಾಯಿತು.


ಬೂತ್ ಸಮಿತಿ ಅಧ್ಯಕ್ಷ ದೇರಣ್ಣ ಗೌಡ ಓಮಂದೂರು ಅವರು ದಮಯಂತಿ ಅವರ ಪತಿ ಶೇಖರ ಗೌಡ ಆಲಾಜೆ ಅವರಿಗೆ ನೆರವು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬಜತ್ತೂರು ಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ್ ಕುಮಾರ್ ಪಂರ್ದಾಜೆ, ಗಂಗಾಧರ ನೆಕ್ಕರಾಜೆ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗಣೀಶ್ ಕಿಂಡೋವು ಪ್ರಮುಖರಾದ ಸುಧಾಕರ ಕಣಿಯ, ಸತೀಶ್ ಕಣಿಯ, ದಿನೇಶ್ ಕಿಂಡೋವು, ಉಪೇಂದ್ರ ಕಿಂಡೋವು ಹಾಗೂ ಕೊರಗಪ್ಪ ಗೌಡ ಆಲಾಜೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here