ಸರ್ವೆ: ಯುವಶ್ರೀ ಸ್ವಸಹಾಯ ಸಂಘ ಉದ್ಘಾಟನೆ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸರ್ವೆ ಎ ಒಕ್ಕೂಟದ ಅಧೀನದಲ್ಲಿ ಹತ್ತು ಜನರ ನೂತನ ಯುವಶ್ರೀ ಸ್ವಸಹಾಯ ಸಂಘವನ್ನು ಸವಣೂರು ವಲಯದ ಮಾಜಿ ಅಧ್ಯಕ್ಷ ರಾಮಚಂದ್ರ ಸೊರಕೆಯವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕೆದಂಬಾಡಿ ಗ್ರಾ.ಪಂ ಸದಸ್ಯ ವಿಠಲ ರೈ ಮಿತ್ತೋಡಿ, ಸಂಘದ ಸದಸ್ಯೆ ಪುಷ್ಪಾವತಿ, ಪದಾಧಿಕಾರಿ ಶಾಲಿನಿ ಉಪಸ್ಥಿತರಿದ್ದರು. ಸಂಘದ ಪ್ರಬಂಧಕರಾಗಿ ಇಸುಬು, ಸಂಯೋಜಕರಾಗಿ ಚಂದ್ರಶೇಖರ ಸೊರಕೆ, ಕೋಶಾಧಿಕಾರಿಯಾಗಿ ಪ್ರದೀಪ್ ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಸರ್ವೆ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ರೇಖಾ ರೈ ಸ್ವಾಗತಿಸಿದರು. ಪುಷ್ಪಾ ವಂದಿಸಿದರು.

LEAVE A REPLY

Please enter your comment!
Please enter your name here