ದ.ಕ.ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್: ನೂತನ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು ಘಟಕದ ಅಧ್ಯಕ್ಷರಾಗಿ ಶರಣ್‌ಕುಮಾರ್, ಕಾರ್ಯದರ್ಶಿ ಸುರೇಂದ್ರ
ಪುತ್ತೂರು: ದಕ್ಷಿಣ ಕನ್ನಡ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ನ ಪುತ್ತೂರು ದ ಮುತ್ತು ಘಟಕದ 2023ನೇ ಸಾಲಿನ ಸಭೆಯನ್ನು ಹೋಟೆಲ್ ಸ್ವಾಗತ್ ನ ಮಿನಿ ಹಾಲ್ ನಲ್ಲಿ ತೇಜಕುಮಾರ್ ರವರ ಹಾಗೂ ಸಂಘದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಸಲಾಯಿತು. ಈ ಸಭೆಯಲ್ಲಿ ಸಂಘದ ಚಟುವಟಿಕೆ ಗಳ ಚರ್ಚೆ ನಡೆಸಿ ಮುಂದಿನ ವರ್ಷಕ್ಕೆ ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು. ಅಧ್ಯಕ್ಷರಾಗಿ ಶರಣ್ ಕುಮಾರ್ , ಉಪಾಧ್ಯಕ್ಷರಾಗಿ ಪ್ರವೀಣ್, ಕಾರ್ಯದರ್ಶಿ ಸುರೇಂದ್ರ, ಕೋಶಾಧಿಕಾರಿಯಾಗಿ ಜಗದೀಶ್ ಗೌಡ ಹಾಗೂ ಸಲಹೆಗಾರರಾಗಿ ತೇಜಕುಮಾರ್ ಮತ್ತು ಹಮೀದ್ ಅವರನ್ನು ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ಮೋನಪ್ಪ ಪೂಜಾರಿ ಯವರನ್ನು ಆಯ್ಕೆ ಮಾಡಲಾಯಿತು.
ಈ ಸಭೆಯಲ್ಲಿ ಸದಸ್ಯರು ಗಳಾದ ವಿಕ್ರಮ್ ಡಿ ಸೋಜಾ, ಪ್ರಶಾಂತ್ ಯಾದವ್, ನಾಗೇಶ್, ಉಮರ್, ಶಶಿಕಾಂತ್, ಬಾಲಕೃಷ್ಣ, ರಮೇಶ್ ನಾಯಕ್, ಜಯಂತಗೌಡ, ಯೋಗೇಶ್ ಹರೀಶ್ ಗೌಡ ಗೌರೀಶ್, ಜಯಣ್ಣ ಶ್ಯಾಮ್ ಭಟ್,ಇಂದು ಶೇಖರ್ ಸತ್ಯಪ್ರಸಾದ್ ಧನಂಜಯ ಕುಶಾಲಪ್ಪ ಫಿಲಿಪ್ ಡಿಸೋಜ, ಭರತ್ ಮುಂತಾದವರು ಉಪಸ್ಥಿತರಿದ್ದರು ಪದಾಧಿಕಾರಿಗಳು ಈ ಸಭೆಯನ್ನು ಉದ್ದೇಶಿಸಿ ಕೆಲವು ಸಲಹೆ ಸೂಚನೆಗಳನ್ನು ನೀಡಿದರು.

LEAVE A REPLY

Please enter your comment!
Please enter your name here