ರಾಮಚಂದ್ರ ಬನಾರಿಯವರ ಶ್ರದ್ಧಾಂಜಲಿ ಸಭೆ

0

ಕಾಣಿಯೂರು: ಇತ್ತೀಚಿಗೆ ನಿಧನರಾದ ರಾಮಚಂದ್ರ ಬನಾರಿಯವರ ಶ್ರದ್ದಾಂಜಲಿ ಸಭೆಯು ಬರೆಪ್ಪಾಡಿ ದ್ವಾಕ್ರ ಕಟ್ಟಡದಲ್ಲಿ ಜು 30ರಂದು ನಡೆಯಿತು.

ಕಾಣಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಕೃಷ್ಣ ಭಟ್, ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅನುವಂಶಿಯ ಮೊಕ್ತೇಸರರಾದ ಜನೇಶ್ ಭಟ್ ಬರೆಪ್ಪಾಡಿ, ಸುಳ್ಯ ಅಕ್ರಮ ಸಕ್ರಮ ಸಮಿತಿ ಮಾಜಿ ಸದಸ್ಯ ಪ್ರವೀಣ್ ಕುಮಾರ್ ಕೆಡೆಂಜಿ, ಕುದ್ಮಾರು ಶಾಲಾ ಮುಖ್ಯಗುರು ಕುಶಾಲಪ್ಪ ಬಿ, ಕೊಂಡಾಡಿಕೊಪ್ಪ ಶಾಲಾ ಶಿಕ್ಷಕ ಜಯಂತ್ ವೈ, ಮೆಸ್ಕಾಂ ಉದ್ಯೋಗಿ ಉಮೇಶ್ ಕೆರೆನಾರು ಅವರು ನುಡಿನಮನ ಸಲ್ಲಿಸಿದರು. ಮೇದಪ್ಪ ಗೌಡ ಕುವೆತ್ತೋಡಿ, ಲೋಕೇಶ್ ಬಿ. ಎನ್, ಪದ್ಮನಾಭ ಕೆರೆನಾರು, ಬಾಲಚಂದ್ರ ನೂಜಿ, ಅನಿಲ್ ಖಂಡಿಗ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ರಾಮಚಂದ್ರ ಬನಾರಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಸಹಾಯಧನ ಹಸ್ತಾಂತರ:
ರಾಮಚಂದ್ರ ಬನಾರಿಯವರ ಗೆಳೆಯರು ಸೇರಿ ಸಂಗ್ರಹಿಸಿದ ರೂ. 28,240 ನ್ನು ರಾಮಚಂದ್ರ ಬನಾರಿಯವರ ಪತ್ನಿ ಹಾಗೂ ಮಕ್ಕಳಿಗೆ ಹಸ್ತಾಂತರಿಸಲಾಯಿತು.

LEAVE A REPLY

Please enter your comment!
Please enter your name here