ಬ್ಯಾಂಕ್ ಆಫ್ ಬರೋಡಾ ಕಾಣಿಯೂರು ಶಾಖೆಯ ಉದ್ಯೋಗಿ ಶಿವರಾಮ ಶೆಟ್ಟಿ ದೇವಸ್ಯ ಜು.31ರಂದು ಸೇವಾ ನಿವೃತ್ತಿ

0

ಪುತ್ತೂರು: ಬ್ಯಾಂಕ್ ಆಫ್ ಬರೋಡಾ ಕಾಣಿಯೂರು ಶಾಖೆಯ ಉದ್ಯೋಗಿ ಶಿವರಾಮ ಶೆಟ್ಟಿ ದೇವಸ್ಯ ಅವರು ಜು.31ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
ಈ ಹಿಂದೆ ಬ್ಯಾಂಕ್ ಅಫ್ ಬರೋಡಾ ವಿಜಯ ಬ್ಯಾಂಕ್ ಹೆಸರಿನಲ್ಲಿ ಕಾರ‍್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ 1991ರಲ್ಲಿ ವಿಜಯಾ ಬ್ಯಾಂಕ್‌ಗೆ ಕರ್ತವ್ಯಕ್ಕೆ ಸೇರ್ಪಡೆಯಾದ ಶಿವರಾಮ ಶೆಟ್ಟಿರವರು ಮುಂಡಾಜೆ, ದೊಡ್ಡತೋಟ, ಕೊಡಗು ಜಿಲ್ಲೆಯ ಕಾನೂರುಗಳಲ್ಲಿ ಸೇವೆ ಸಲ್ಲಿಸಿ, 2018ರಲ್ಲಿ ಕಾಣಿಯೂರು ಶಾಖೆಗೆ ವರ್ಗಾವಣೆಗೊಂಡಿದ್ದರು. ಇವರು ಬ್ಯಾಕಿಂಗ್ ಕೇತ್ರದಲ್ಲಿ ಒಟ್ಟು 32 ವರ್ಷಗಳ ಸೇವೆ ಸಲ್ಲಿಸಿದ್ದರು. ಶಿವರಾಮ ಶೆಟ್ಟಿರವರು ಪತ್ನಿ ಚಿತ್ರಾ ಶೆಟ್ಟಿ ಹಾಗೂ ಪುತ್ರ ಕ್ಷಿತಿಜ್ ಎಸ್. ಶೆಟ್ಟಿ ರವರೊಂದಿಗೆ ಸವಣೂರು ಗ್ರಾಮದ ಅರಿಗಮಜಲು ಶಿವಂ ನಿವಾಸದಲ್ಲಿ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here