ಜಿಡೆಕಲ್ಲು ಶಾಲಾ ಶಿಕ್ಷಕರ ಬೀಳ್ಕೊಡುಗೆ ಸಮಾರಂಭ

0

ಪುತ್ತೂರು: ದ.ಕ.ಜಿ.ಪ.ಹಿ.ಪ್ರಾ ಶಾಲೆ ಜಿಡೆಕಲ್ಲು ಇಲ್ಲಿನ ಮೂರು ಜನ ಶಿಕ್ಷಕರಿಗೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಜಿಡೆಕಲ್ಲು ಮತ್ತು ಚಿಕ್ಕಮುಡ್ನರು ಕಲಿಯುಗ ಸೇವಾ ಸಮಿತಿ ಇವುಗಳ ಜಂಟಿ ಆಶ್ರಯದಲ್ಲಿ ಗೌರವ ಸಮರ್ಪಣೆ ಮತ್ತು ಬೀಳ್ಕೊಡುಗೆ ಸಮಾರಂಭ ಜು.31 ರಂದು ಜಿಡೆಕಲ್ಲು ಶಾಲೆಯಲ್ಲಿ ನಡೆಯಿತು.


ಇಲ್ಲಿನ ಮುಖ್ಯ ಶಿಕ್ಷಕಿ ಪುಷ್ಪಾವತಿ ಅವರು ನಿವೃತ್ತಿ ಹೊಂದಿದ್ದು ಪ್ರೇಮ ಕೆ.ಸಿ ಮತ್ತು ಸುನಿತಾ ಎನ್ ಅವರು ಬೇರೆ ಶಾಲೆಗೆ ವರ್ಗಾವಣೆ ಹೊಂದಿರುವುದರಿಂದ ಪೋಷಕರ ಸಹಕಾರದೊಂದಿಗೆ ಕಾರ್ಯಕ್ರಮವನ್ನು ನಡೆಸಲಾಯಿತು.


ಕಾರ್ಯಕ್ರಮದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕೊಡಿಂಬಾಡಿ ಕ್ಲಷ್ಟರ್‌ನ ಅಶ್ರಪ್ ಅವರು ನಿವೃತ್ತರಾದ, ವರ್ಗಾವಣೆಗೊಂಡ ಶಿಶ್ಷಕರಿಗೆ ಗೌರವ ಸಮರ್ಪಣೆಯನ್ನು ಸಡೆಸಿಕೊಟ್ಟರು. ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ತೀರ್ಥರಾಮ ಅವರು ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ನವೀನ್ ರೈ, ಉಪಾಧ್ಯಕ್ಷ ಸುಧಾಕರ ರೈ, ಜಿಲ್ಲಾ ಕಾರ್ಯದರ್ಶಿ ಗಂಗಾವತಿ, ಮೊನಪ್ಪ ಗೌಡ ಎಚ್, ಶೋಭಾ, ಉಮೇಶ್ ಕೆ, ಗಂಗಾಧರ ವೇದಿಕೆಯಲ್ಲಿ ಉಪಸ್ಥಿತರಿದ್ದರು ಶಿಶ್ಷಕರಾದ ಜಯಶ್ರೀ ಮತ್ತು ಜ್ಯೋತಿ, ಲೀನಾ ಡಿಸೋಜ ಕಾರ್ಯಕ್ರಮದಲ್ಲಿ ಸಹಕರಿಸಿದರು. ಶಿಕ್ಷಕಿ ಅಶ್ವಿನಿ ಸ್ವಾಗತಿಸಿ, ಜಯಶ್ರೀ ವಂದಿಸಿದರು. ಸಂಪತ್ ಕುಮಾರ್ ಜೈನ್ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here