ಕೊಳ್ತಿಗೆ ಶಾಲಾ ನಿವೃತ್ತ ಮುಖ್ಯ ಗುರು ನಾರಾಯಣ ರೈ ಕೆಳಗಿನ ಮನೆ ನಿಧನ

0

ಪುತ್ತೂರು : ದ. ಕ ಜಿ. ಪ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಳ್ತಿಗೆ ಇಲ್ಲಿನ ವಿಶ್ರಾಂತ ಮುಖ್ಯ ಗುರು , ಕೊಳ್ತಿಗೆ ಕೆಳಗಿನ ಮನೆಯ ತರವಾಡ್ ನ ಯಜಮಾನ ನಾರಾಯಣ ರೈ(90) ಇವರು ಆ.3. ರಂದು ಮಧ್ಯಾಹ್ನ ನಿಧನರಾದರು.


ಮುರುಳ್ಯ, ಕೊಳ್ತಿಗೆ ಶಾಲೆಯಲ್ಲಿ ಶಿಕ್ಷಕರರಾಗಿ, ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸಿದ್ದು.ಇವರ ಅವಧಿಯಲ್ಲಿ ಕೊಳ್ತಿಗೆ ಶಾಲೆಯು ಶೈಕ್ಷಣಿಕವಾಗಿ ತುಂಬಾ ಪ್ರಗತಿಯನ್ನು ಹೊಂದಿದ್ದನ್ನು ಇಂದಿಗೂ ಗ್ರಾಮಸ್ಥರು ನೆನಪಿಸಿಕೊಳ್ಳುತ್ತಾರೆ. ಮೃತರ ಅಂತಿಮ ವಿಧಿ ವಿಧಾನಗಳು ಸ್ವಗೃಹದಲ್ಲಿ ಆ.3 ರಂದು(ಇಂದು) ನಡೆಯಲಿದೆ ಎಂದು ಕುಟುಂಬ ವರ್ಗ ತಿಳಿಸಿದೆ. ಮೃತರು ಸಹೋದರರು, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬವರ್ಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here