ಬನ್ನೂರು ಗುಂಡಿಜಾಲು ಅಂಗನವಾಡಿ ಕೇಂದ್ರದ ಸಹಾಯಕಿ ದೇವಕಿ ನಿವೃತ್ತಿ

0

ಪುತ್ತೂರು: ಬನ್ನೂರು ಗ್ರಾಮದ ಗುಂಡಿಜಾಲು ಅಂಗನವಾಡಿ ಕೇಂದ್ರದಲ್ಲಿ 17 ವರ್ಷ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸಿದ ಗುಂಡಿಜಾಲು ನಿವಾಸಿ ದೇವಕಿ ಅವರು ಜು.31ರಂದು ನಿವೃತ್ತಿ ಹೊಂದಿದ್ದಾರೆ.

ಗುಂಡಿಜಾಲು ದಯಾನಂದ ಅವರ ಪತ್ನಿ ದೇವಕಿ ಅವರು 2006ರಲ್ಲಿ ಗುಂಡಿಜಾಲು ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಕರ್ತವ್ಯಕ್ಕೆ ಸೇರ್ಪಡೆಗೊಂಡಿದ್ದರು. ಇದೀಗ ಜು.31ರಂದು ಅವರು ನಿವೃತ್ತಿ ಹೊಂದಿದ್ದಾರೆ. ದೇವಕಿ ಅವರ ಪುತ್ರಿಯರಾದ ಪೂಜಾಶ್ರೀ ಅವರು ಮೈಸೂರಿನ ಕಂಪೆನಿಯೊಂದರಲ್ಲಿ ಇಂಜಿನಿಯರ್ ಆಗಿದ್ದು, ಹರ್ಷಿತಾ ಅವರು ಬೆಂಗಳೂರಿನಲ್ಲಿದ್ದಾರೆ. ಪ್ರಜ್ವಲಾ ಅವರು ಬೆಂಗಳೂರಿನ ಕಂಪೆನಿಯೊಂದರಲ್ಲಿ ಅಕೌಂಟೆಂಡ್ ಆಗಿದ್ದಾರೆ.

LEAVE A REPLY

Please enter your comment!
Please enter your name here