ಕುರಿಯ ಏಳ್ನಾಡುಗುತ್ತು ತರವಾಡು ಮನೆಗೆ ಗ್ಯಾಸ್ ಸ್ಟವ್ ಕೊಡುಗೆ

0

ಪುತ್ತೂರು: ಬೆಂಗಳೂರುನಲ್ಲಿ ಉದ್ಯಮಿಯಾಗಿರುವ ಕುರಿಯ ಏಳ್ನಾಡುಗುತ್ತು ಕುಟುಂಬದ ಸದಸ್ಯ ನಂಜೆ ಪುಷ್ಟರಾಜ್ ಶೆಟ್ಟಿ ಕುರಿಯ ಏಳ್ನಾಡುಗುತ್ತು ರವರು ಆ.6 ರಂದು ಕುರಿಯ ಏಳ್ನಾಡುಗುತ್ತು ತರವಾಡು ಮನೆಯಲ್ಲಿ ಆಟಿದ ಆಗೆಲು ಕಾರ್ಯಕ್ರಮದ ಸಂದರ್ಭದಲ್ಲಿ ದೊಡ್ಡ ಗ್ಯಾಸ್ ಸ್ಟವ್ ನ್ನು ಕೊಡುಗೆಯಾಗಿ ನೀಡಿದರು.


ಕುಟುಂಬದ ಯಜಮಾನ ಸೀತಾರಾಮ ರೈಯವರು ಕೊಡುಗೆಯನ್ನು ಸ್ವೀಕರಿಸಿ, ಕೊಡುಗೆ ನೀಡಿದವರಿಗೆ ಹಾಗೂ ಅವರ ಮನೆಯವರಿಗೆ ಕುಟುಂಬದ ದೈವ ದೇವರು ಹಾಗೂ ಗುರು ಹಿರಿಯರು ಸಕಲ ಸಂಪತ್ತು ಐಶ್ವರ್ಯ ಆಯುಷ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸಿ ಕೊಡುಗೆಯನ್ನು ತರವಾಡು ಮನೆಗೆ ಹಸ್ತಾಂತರಿಸಿದರು ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here