ಪುತ್ತೂರು: ಬಪ್ಪಳಿಗೆ ಅಂಗನವಾಡಿ ಕೇಂದ್ರದಲ್ಲಿ ಆದರ್ಶ ಸ್ತ್ರೀಶಕ್ತಿ ಸ್ವಸಹಾಯ ಸಂಘದ ವತಿಯಿಂದ ಆಟಿಕೂಟ ಕಾರ್ಯಕ್ರಮ ನಡೆಯಿತು. ಸಂಘದ ಹಿರಿಯ ಸದಸ್ಯೆ ವಿಶಾಲಾಕ್ಷಿ ಹೆಗ್ಡೆ, ಅಧ್ಯಕ್ಷೆ ನಳಿನಿ, ಕಾರ್ಯದರ್ಶಿ ವನಜಾರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಸದಸ್ಯೆ ನಳಿನಾಕ್ಷಿರವರು ಆಟಿ ತಿಂಗಳ ವಿಶೇಷತೆ ತಿಳಿಸಿದರು. ಸದಸ್ಯೆ ಸ್ವರ್ಣಲತಾ ಹೆಗ್ಡೆ ಆಟಿ ಕಳೆಂಜದ ಮಾಹಿತಿ ತಿಳಿಸಿದರು. ಅಂಗನವಾಡಿ ಕಾರ್ಯಕರ್ತೆ ಸುಮಿತ್ರಾಹರೀಶ್ ಆಟಿ ತಿಂಗಳ ತಿಂಡಿತಿನಿಸುಗಳ ಮಹತ್ವ ತಿಳಿಸಿದರು. ಸಂಘದ ಸದಸ್ಯೆ ವೇದಾವತಿ ಅದೃಷ್ಟ ವಿನ್ನರ್ ಆಗಿ ಆಯ್ಕೆಗೊಂಡರು.