ನೇತ್ರಾವತಿ ಅಟೋ ರಿಕ್ಷಾ ಚಾಲಕ- ಮಾಲಕ ಸಂಘದಿಂದ ಸ್ವಾತಂತ್ರ್ಯೋತ್ಸವ

0

ಉಪ್ಪಿನಂಗಡಿ: ಇಲ್ಲಿನ ನೇತ್ರಾವತಿ ಅಟೋ ರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕ ರಾಜೇಶ್ ಕೆ.ವಿ. ಧ್ವಜಾರೋಹಣಗೈದರು.

ಬಳಿಕ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದ ಅವರು, ಈ ದಿನ ಕಂಡು ಬರುವ ಐಕ್ಯತೆ ಅನುದಿನವೂ ಮುಂದುವರಿಯಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಮುಖರಾದ ಎಚ್. ಯೂಸುಫ್ ಹಾಜಿ, ಗಣೇಶ್ ಶೆಣೈ, ಪ್ರಶಾಂತ್ ಡಿಕೋಸ್ತ, ವಿದ್ಯಾಲಕ್ಷ್ಮೀ ಪ್ರಭು, ಅನಿ ಮಿನೇಜಸ್, ಉಚಾಚಂದ್ರ ಮುಳಿಯ, ಹಾರೂನ್ ರಶೀದ್ ಅಗ್ನಾಡಿ, ತೌಸೀಫ್ ಯು.ಟಿ., ಅಬ್ದುರ್ರಹ್ಮಾನ್ ಯುನಿಕ್, ಶಬೀರ್ ಕೆಂಪಿ, ಯತೀಶ್ ಶೆಟ್ಟಿ, ನಝೀರ್ ಮಠ, ಅಟೋ ರಿಕ್ಷಾ ಚಾಲಕ- ಮಾಲಕರ ಸಂಘದ ಕೆ.ಎಚ್. ಅಬ್ದುಲ್ ಲತೀಫ್, ಕಾರ್ಯದರ್ಶಿ ಚಂದ್ರಶೇಖರ ಪುಳಿತ್ತಡಿ, ಕೋಶಾಧಿಕಾರಿ ಕಲಂದರ್ ಶಾಫಿ, ಅಬ್ದುಲ್ ಮಜೀದ್ ರಾಮನಗರ, ಫಾರೂಕ್ ಜಿಂದಗಿ, ಅಶೋಕ್ ಶೆಟ್ಟಿ ಹೆನ್ನಾಳ, ಅಶೋಕ್ ಬಂಡಾಡಿ, ಆಸೀಫ್ ಕೊಯಿಲ, ಬಿ. ಅಬ್ಬಾಸ್, ಅಬ್ದುರ್ರಹ್ಮಾನ್ ಜುಬ್ಬಿ ಮತ್ತಿತರರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಪೇಟೆಯಲ್ಲಿ ರಿಕ್ಷಾ ಜಾಥಾ ನಡೆಯಿತು.

LEAVE A REPLY

Please enter your comment!
Please enter your name here