ಕೊಳ್ತಿಗೆ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ 

0

ಕೊಳ್ತಿಗೆ :- ಸರಕಾರಿ‌ ಹಿರಿಯ ಪ್ರಾಥಮಿಕ ಶಾಲೆ ಕೊಳ್ತಿಗೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಧ್ವಜಾರೋಹಣ ಕೊಳ್ತಿಗೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಜನಾರ್ದನ ಮೇರಡ್ಕರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಕೊಳ್ತಿಗೆ ಗ್ರಾಮ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಕೆಮ್ಮಾರ, ಯತೀಂದ್ರ ಕೊಚ್ಚಿ, ವೇದಾವತಿ ಕೆಮ್ಮಾರ, ಹಳೆವಿದ್ಯಾರ್ಥಿ ಸಂಘ‌ ಅಧ್ಯಕ್ಷರಾದ ಜಯತ್ ಕೆಮ್ಮಾರ, ಕೊಳ್ತಿಗೆ ಸಿ.ಎ ಬ್ಯಾಂಕ್ ನ ನಿರ್ದೆಶಕರಾದ ಗಂಗಾಧರ ಗೌಡ ಕೆಮ್ಮಾರ, ಮುರಲೀಧರ ಕೆಮ್ಮಾರ, ನೇಮಿರಾಜ್ ಪಾಂಬಾರು, ರಾಮಚಂದ್ರ ಅಮಲ, ಮೋಹನ ಗೌಡ ಕೆಮ್ಮಾರ, ಭಾಸ್ಕರ ರೈ ಪುನರಡ್ಕ, ಕೃಷ್ಪಪ್ಪ‌ಗೌಡ ಬಾಯಂಬಾಡಿ, ಶಿವರಾಮ‌ ಕೆಮ್ಮಾರ, ನಿವೃತ್ತ‌ ಮುಖ್ಯಗುರುಗಳಾದ ಮಾಯಿಲಪ್ಪ ಗೌಡ ಉಪಸ್ಥಿತರಿದ್ದರು. ಹಳೆವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು, ಶಾಲಾ ಎಸ್ ಡಿ ಎಂ ಸಿ ಸದಸ್ಯರು, ಮಕ್ಕಳ ಪೋಷಕರು, ಊರ ಹಿರಿಯರುಗಳು, ಶಾಲಾ ಶಿಕ್ಷಕರು, ಕೊಳ್ತಿಗೆ ಮತ್ತು ಬಾಯಂಬಾಡಿ ಅಂಗನವಾಡಿ ಕೇಂದ್ರದ ಮಕ್ಕಳು ಮತ್ತು ಕಾರ್ಯಕರ್ತೆಯರು, ವಿವಿಧ ಸಂಘ ಸಂಸ್ಥೆಗಳ‌ ಪದಾಧಿಕಾರಿಗಳು ಉಪಸ್ಥಿತರಿದ್ದರು. 

ನಂತರ ಮೆರವಣಿಗೆಯು ಕೊಳ್ತಿಗೆ ಶಾಲೆಯಿಂದ ಬಾಯಂಬಾಡಿ ದೇವಸ್ಥಾನದವರೆಗೆ ನಡೆಯಿತು. ‌ನಂತರ ಸಭಾಕಾರ್ಯಕ್ರಮ ನಡೆಯಿತು. ಶಾಲಾ‌ ಮಕ್ಕಳಿಗೆ ಸ್ಪರ್ಧೆಗಳ ಬಹುಮಾನವನ್ನು ನೀಡಲಾಯಿತು. ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here