ಅನಾರೋಗ್ಯ ಪೀಡಿತ ದೈವ ನರ್ತನ ಕುಟುಂಬದ ಸದಸ್ಯರಿಗೆ ಪುತ್ತಿಲ ಪರಿವಾರದಿಂದ ಆರ್ಥಿಕ ನೆರವು, ಅಗತ್ಯ ವಸ್ತುಗಳ ಪೂರೈಕೆ

0

ಪುತ್ತೂರು: ದೈವ ನರ್ತನ ಸೇವೆಗೈಯುವ ಕುಟುಂಬವಾದ ಪೆರ್ಲಂಪಾಡಿ ನಿವಾಸಿ ರಮೇಶ್ ಅಜಲರು ಕೆಲ ಸಮಯಗಳಿಂದ ಅನಾರೋಗ್ಯ ಪೀಡಿತರಾಗಿದ್ದು, ಅವರ ಮನೆಗೆ ತೆರಳಿದ ಪುತ್ತಿಲ ಪರಿವಾರ ಆರ್ಥಿಕ ನೆರವು  ಮತ್ತು ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಸಿದ್ದಾರೆ.

ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತ, ನಗರ ಸಮಿತಿ ಅಧ್ಯಕ್ಷ ಅನಿಲ್ ತೆಂಕಿಲ, ಉಪಾಧ್ಯಕ್ಷರಾದ ರಾಜ್ ಶೆಟ್ಟಿ , ಶನ್ಮಿತ್ ರೈ, ಕೊಳ್ತಿಗೆ ಗ್ರಾಮದ ಸತ್ಯಪ್ರಕಾಶ್ ಕುಂಟಿಕಾನ,  ಕಾರ್ಯದರ್ಶಿ ಶಶಿಕುಮಾರ್, ರಜನೀಶ್ ಬೇರಿಕೆ ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here