ಕಿಲ್ಲೆ ಮೈದಾನದ ಸಾರ್ವಜನಿಕ ಮಹಾಗಣಪತಿ ಉತ್ಸವಕ್ಕೆ ಚಪ್ಪರ ಮುಹೂರ್ತ

0

ಪುತ್ತೂರು: ಶ್ರೀ ದೇವತಾ ಸಮಿತಿ ಆಶ್ರಯದಲ್ಲಿ ಕಿಲ್ಲೆ ಮೈದಾನದಲ್ಲಿ 66ನೇ ವರ್ಷದ ಸಾರ್ವಜನಿಕ ಶ್ರೀ ಮಹಾಗಣಪತಿ ಉತ್ಸವಕ್ಕೆ ಆ.23 ರಂದು ಬೆಳಿಗ್ಗೆ ಚಪ್ಪರ ಮುಹೂರ್ತ ನೆರವೇರಿಸಲಾಯಿತು.

ವೇ.ಮೂ ಸುಬ್ರಹ್ಮಣ್ಯ ಹೊಳ್ಳ ಅವರು ಚಪ್ಪರ ಮುಹೂರ್ತ ನೆರವೇರಿಸಿದರು. ರಾಜರಾಮ ಭಟ್ ಸಹಾಯಕ ಅರ್ಚಕರಾಗಿ ಸಹಕರಿಸಿದರು. ಈ ಸಂದರ್ಭ ದೇವತಾ ಸಮಿತಿ ಅಧ್ಯಕ್ಷ ಎನ್.ಸುಧಾಕರ್ ಶೆಟ್ಟಿ, ಸಮಿತಿಯ ಪದಾಧಿಕಾರಿಗಳಾದ ದಿನೇಶ್ ಪಿ.ವಿ., ಸೂತ್ರಬೆಟ್ಟು ಜಗನ್ನಾಥ ರೈ, ಸುದೇಶ್ ಚಿಕ್ಕಪುತ್ತೂರು, ಉಮಾಶಂಕರ್, ಸುರೇಂದ್ರ ನಗರ, ಕೇಶವ್ ನಾಯ್ಕ್, ವಿಗ್ರಹ ಶಿಲ್ಪಿ ರಮೇಶ್ ಪೂಜಾರಿ, ಸುಧಾಕರ್ ಶೆಟ್ಟಯವರ ಪುತ್ರ ಅಭಿಜೀತ್, ನಗರಸಭೆಯ ಸ್ಯಾನಿಟರಿ ಸೂಪರ್‌ವೈಸರ್ ಅಮಿತ್‌ರಾಜ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here