ಸುಬ್ರಹ್ಮಣ್ಯ: ಐವತೊಕ್ಲು ಬಳಿ ದ್ವಿಚಕ್ರ ವಾಹನಕ್ಕೆ ಗೂಡ್ಸ್ ವಾಹನ ಡಿಕ್ಕಿ- ದ್ವಿ ಚಕ್ರ ವಾಹನ ಸವಾರನಿಗೆ ಗಾಯ

0

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಐವತೊಕ್ಲು ಬಳಿ ದ್ವಿಚಕ್ರ ವಾಹನಕ್ಕೆ ಗೂಡ್ಸ್ ವಾಹನ ಡಿಕ್ಕಿಯಾಗಿ  ದ್ವಿ ಚಕ್ರ ವಾಹನ ಸವಾರನಿಗೆ ಗಾಯವಾದ ಬಗ್ಗೆ ವರದಿಯಾಗಿದೆ.

ಐವತೊಕ್ಲು ಗ್ರಾಮದ ನೆಲ್ಲಿಕಟ್ಟೆ ತಿರುವು ರಸ್ತೆಯಿಂದ  ಸ್ವಲ್ಪ  ಮುಂದೆ  ಪಂಜ ಕಡೆಯಿಂದ ಚಂದ್ರ ನಾಯಕ್ ಎಂಬವರು ಚಲಾಯಿಸುತ್ತಿದ್ದ ಗೂಡ್ಸ್‌  ವಾಹನ ಸುಬ್ರಹ್ಮಣ್ಯ ಕಡೆಯಿಂದ ಆಸ್ತಿಕ್‌ ಎಂಬಾತ ಚಲಾಯಿಸುತ್ತಿದ್ದ  ದ್ವಿ ಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರವಾಹನದ ಸವಾರನ ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಗಾಯಾಳುವನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಐವತ್ತೊಕ್ಲು ಗ್ರಾಮದ ನಿವಾಸಿ ಶೇಷ ಕುಮಾರ ಎಂಬವರ ದೂರಿನಂತೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ 67/2023 ಕಲಂ:279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here