ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ

0

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೆವಸ್ಥಾನದ ರಾಜಗೋಪುರದಲ್ಲಿ ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದಿಂದ ತಿಂಗಳ ಸರಣಿ ತಾಳಮದ್ದಳೆ ” ಶ್ರೀ ಕೃಷ್ಣ ರಾಯಭಾರ ” ನಡೆಯಿತು.
ಹಿಮ್ಮೇಳದಲ್ಲಿ ಯಲ್ ಯನ್ ಭಟ್, ಸತೀಶ್ ಇರ್ದೆ, ಪದ್ಯಾಣ ಜಯರಾಮ ಭಟ್, ಪರೀಕ್ಷಿತ್ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ್ ಬಾರ್ಯ (ಶ್ರೀ ಕೃಷ್ಣ ), ಪೂಕಳ ಲಕ್ಷ್ಮೀ ನಾರಾಯಣ ಭಟ್ (ವಿದುರ), ಗುಂಡ್ಯಡ್ಕ ಈಶ್ವರ ಭಟ್ (ಕೌರವ), ಅಚ್ಯುತ ಪಾಂಗಣ್ಣಾಯ ಕೋಡಿಬೈಲು (ಭಾನುಮತಿ) ಸಹಕರಿಸಿದರು. ಈ ಸಂದರ್ಭದಲ್ಲಿ ಶ್ರೀ ದೇವಳವು ಹಮ್ಮಿಕೊಂಡ ಏಕದಶ ಕೋಟಿ ಓ೦ ಶ್ರೀ ಮಹಾಲಿಂಗೇಶ್ವರ ಜಪದಲ್ಲಿ ಕಲಾವಿದರು ಪಾಲ್ಗೊಂಡರು .ಟಿ.ರಂಗನಾಥ ರಾವ್, ಶುಭಾ ಅಡಿಗ ಸಹಕರಿಸಿದರು.

LEAVE A REPLY

Please enter your comment!
Please enter your name here