ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘದಿಂದ ತಾಳಮದ್ದಲೆ

0

ಪುತ್ತೂರು: ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ವತಿಯಿಂದ ಸೋಣ ಶನಿವಾರದ ಪ್ರಯುಕ್ತ ಶ್ರೀಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿ ಇಂದ್ರಜಿತು ಕಾಳಗ ಯಕ್ಷಗಾನ ತಾಳಮದ್ದಲೆ ನಡೆಯಿತು. ಭಾಗವತರಾಗಿ ಸತೀಶ್ ಇರ್ದೆ, ಶ್ಯಾಮ್‌ಪ್ರಸಾದ್ ಎಂ., ದಾಮೊದರ್ ಎಂ., ಚೆಂಡೆ ಮದ್ದಲೆಯಲ್ಲಿ ರೊಶನ್ ಕಾಟುಕುಕ್ಕೆ, ಮುರಳೀಧರ್ ಭಟ್, ಸ್ಕಂದ ಕಾಟುಕುಕ್ಕೆ, ರಾಮಯ್ಯ ರೈ, ಅರ್ಥದಾರಿಗಳಾಗಿ ಎನ್.ಸಂಜೀವ ರೈ, ಭಾಸ್ಕರ ಶೆಟ್ಟಿ, ನಾರಾಯಣ ಮೂಲಡ್ಕ, ಜಗನ್ನಾಥ ರೈ ಕಡಮ್ಮಾಜೆ, ಗೋಪಾಲಕೃಷ್ಣ ಮಿತ್ತಡ್ಕ, ಹರಿಪ್ರಸಾದ್ ಮಿತ್ತಡ್ಕ, ಕೀರ್ತನ್, ಬಿ.ವೆಂಕಟರಾವ್, ಪಾರ ಸುಬ್ಬಣ್ಣ ಗೌಡ, ನರಸಿಂಹ ಸಿ.ಕೆ., ಪ್ರದೀಪ್ ರೈ ಕೇಕನಾಜೆ, ಚಂದ್ರಶೇಖರ ಮಣಿಯಾಣಿ ಭಾಗವಹಿಸಿದರು. ಐ.ಗೋಪಾಲಕೃಷ್ಣ ರಾವ್ ಸ್ವಾಗತಿಸಿ ವಂದಿಸಿದರು. ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here