ಉಪ್ಪಿನಂಗಡಿ: ಕಾಡಿನಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

0

ಉಪ್ಪಿನಂಗಡಿ – ಕಾಡಿನಲ್ಲಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಈರ್ವರನ್ನು ಬಂದಿಸಿದ ಘಟನೆ ವರದಿಯಾಗಿದೆ.
ಇಲ್ಲಿನ ವಲಯ ಅರಣ್ಯ ವ್ಯಾಪ್ತಿಯ ಶಿಶಿಲ ಗ್ರಾಮದ ಹೇವಾಜೆ ಎಂಬಲ್ಲಿ ಪುದುಬೆಟ್ಟು ನಿವಾಸಿ ಪ್ರಮೋದ್ ಮತ್ತು ಪ್ರಕಾಶ ಎಂಬವರು ಎರ್‌ಗನ್‌ನೊಂದಿಗೆ ಸೋಮವಾರ ರಾತ್ರಿ ತಿರುಗಾಡುತ್ತಿದ್ದು, ವಿಚಾರಣೆ ನಡೆಸಿ ಅವರು ಬಂದ ಬೈಕ್ ಸಹಿತ ವಶಕ್ಕೆ ತೆಗೆದುಕೊಂಡಿದ್ದು, ಮುಂದಿನ ತನಿಖೆಯನ್ನು ವಲಯಾಧಿಕಾರಿ ಜಯಪ್ರಕಾಶ್ ಕೆ.ಕೆ. ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here