ಪುತ್ತೂರು: ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಸನ್ನಿಧಿಯಲ್ಲಿ ಪ್ರಥಮ ಗಣೇಶೋತ್ಸವದ ಪ್ರಮುಖ ಆಕರ್ಷಣೆಯಾಗಿ ಪುತ್ತೂರು ತೆಂಕಿಲ ಧೀಶಕ್ತಿ ಮಹಿಳಾ ಯಕ್ಷಬಳಗದಿಂದ ಯಕ್ಷಗಾನ ತಾಳಮದ್ದಳೆ “ಶ್ರೀ ರಾಮ ದರ್ಶನ” ಎಂಬ ಆಖ್ಯಾನವು ನಡೆಯಿತು.
ಹಿಮ್ಮೇಳದಲ್ಲಿ,ಸಾಂಪ್ರದಾಯಿಕ ಶೈಲಿಯ ಮೇರು ಭಾಗವತರಾದ ಸುಬ್ರಾಯ ಸಂಪಾಜೆಯವರ ಭಾಗವತಿಕೆಯೊಂದಿಗೆ,ಚೆಂಡೆ- ಮದ್ದಳೆಗಳಲ್ಲಿ,ನುರಿತ ಕಲಾವಿದರಾದ ಶಂಕರನಾರಾಯಣ ಭಟ್ ಪದ್ಯಾಣ ಮತ್ತು ಮುರಳೀಧರ ಕಲ್ಲೂರಾಯ,ಕುಂಜೂರುಪಂಜ ಸಹಕರಿಸಿದರು.
![](https://puttur.suddinews.com/wp-content/uploads/2023/09/yaksha-2.jpg)
ಮುಮ್ಮೇಳದಲ್ಲಿ ಪದ್ಮಾ ಕೆ ಆರ್ ಆಚಾರ್ಯ ಹನುಮಂತನಾಗಿ, ಜಯಲಕ್ಷ್ಮಿ ವಿ ಭಟ್ ವೀರಮಣಿಯಾಗಿ, ಪ್ರೇಮಾ ಕಿಶೋರ್ ಈಶ್ವರನಾಗಿ, ಶಾಲಿನಿ ಅರುಣ್ ಶೆಟ್ಟಿ ಶತ್ರುಘ್ನನಾಗಿ, ಹೀರಾ ಉದಯ್ ಶ್ರೀರಾಮನಾಗಿ ಪಾತ್ರ ನಿರ್ವಹಣೆ ಮಾಡಿದರು.