ಬೇರಿಕೆಯಲ್ಲಿ ರಸ್ತೆ ಬದಿ ಕಸ ಎಸೆದ ಪ್ರಕರಣ: ಉಪ್ಪಿನಂಗಡಿಯ ಮಹಿಳೆಗೆ 5 ಸಾವಿರ ರೂ ದಂಡ ವಿಧಿಸಿದ ನೆಕ್ಕಿಲಾಡಿ ಗ್ರಾ.ಪಂ.‌

0

ಪುತ್ತೂರು: ರಸ್ತೆ ಬದಿ ಮನೆಯ ಕಸವನ್ನು ಎಸೆದ ಪ್ರಕರಣಕ್ಕೆ ಸಂಬಂಧಿಸಿ 34ನೇ ನೆಕ್ಕಿಲಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಐದು ಸಾವಿರ ರೂ ದಂಡ ವಿಧಿಸಿದ ಘಟನೆ ಅ.2ರಂದು ನಡೆದಿದೆ.


34ನೇ ನೆಕ್ಕಿಲಾಡಿ ಗ್ರಾಮದ ಬೇರಿಕೆ ಬಳಿ ರಸ್ತೆ ಬದಿಯಲ್ಲಿ ಮನೆಯ ಕಸವನ್ನು ಹಾಕಿದ ಕಾರಣಕ್ಕಾಗಿ ಪಿಡಿಓ ಸತೀಶ್ ಬಂಗೇರ ಅವರು ಉಪ್ಪಿನಂಗಡಿ ಮಠ ಕೆರೆಮೂಲೆಯ ಅಬ್ದುಲ್ ಲತೀಫ್ ಎಂಬವರ ಪುತ್ರಿ ಅಫ್ರಾ ಅವರಿಗೆ 5 ಸಾವಿರ ರೂ ದಂಡ ವಿಧಿಸಿದ್ದು ಮುಂದಕ್ಕೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here