ನೆಲ್ಯಾಡಿ: ತಾಯಿ, ಮಗ ನಾಪತ್ತೆ-ದೂರು

0

ನೆಲ್ಯಾಡಿ: ತಾಯಿ, ಮಗ ನಾಪತ್ತೆಯಾಗಿರುವ ಪ್ರಕರಣವೊಂದು ನೆಲ್ಯಾಡಿ ಗ್ರಾಮದ ಕರಂದಾಲ ಕೊಪ್ಪ ಎಂಬಲ್ಲಿಂದ ವರದಿಯಾಗಿದೆ.
ಕರಂದಾಲ ಕೊಪ್ಪ ನಿವಾಸಿ, ಕೂಲಿ ಕಾರ್ಮಿಕ ನಾಗೇಶ್ ಎಂಬವರ ಪತ್ನಿ ಶಾರದಾ(37ವ.)ಹಾಗೂ ಅವರ ಮಗ ವಚನ್(6ವ.)ನಾಪತ್ತೆಯಾದವರಾಗಿದ್ದಾರೆ. ಶಾರದಾ ಬೀಡಿ ಕಟ್ಟುವ ಕೆಲಸ ಮಾಡಿಕೊಂಡಿದ್ದು, ಈ ಹಿಂದೆ 2-3 ದಿನ ಮಕ್ಕಳನ್ನು ಕರೆದುಕೊಂಡು ಎಲ್ಲಿಗೋ ಹೋಗಿ ಬರುತ್ತಿದ್ದು ಈ ಬಗ್ಗೆ ನಾಗೇಶ್‌ರವರು ವಿಚಾರಿಸಿದರೂ ಸರಿಯಾಗಿ ಉತ್ತರ ನೀಡುತ್ತಿರಲಿಲ್ಲ. ಸೆ.30ರಂದು ಬೆಳಿಗ್ಗೆ 9 ಗಂಟೆಗೆ ಬಟ್ಟೆಗೆ ಸ್ಟಿಚ್ ಹಾಕಲು ನೆಲ್ಯಾಡಿಗೆ ಹೋಗಿ ಬರುವುದಾಗಿ ಹೇಳಿ ಜೊತೆಯಲ್ಲಿ 2ನೇ ಮಗ ವಚನ್‌ನನ್ನು ಕರೆದುಕೊಂಡು ಹೋಗಿದ್ದಾರೆ. ಶಾರದಾ ಹಾಗೂ ಮಗ ವಚನ್ ಮನೆಗೆ ವಾಪಾಸು ಬಾರದೇ ಇದ್ದ ಹಿನ್ನೆಲೆಯಲ್ಲಿ ನೆರೆಕರೆಯವರಲ್ಲಿ ಹಾಗೂ ಸಂಬಂಧಿಕರಲ್ಲಿ ಪೋನ್ ಕರೆ ಮಾಡಿ ವಿಚಾರಿಸಿದರೂ ಪತ್ತೆಯಾಗಿರುವುದಿಲ್ಲ ಎಂದು ನಾಗೇಶ್‌ರವರು ಉಪ್ಪಿನಂಗಡಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here