ಕಡಬ: ಕಡಬ ಕಾಲೇಜು ರಸ್ತೆಯಲ್ಲಿನ ಗುಂಡಿಗಳನ್ನು ಶ್ರಮದಾನ ಮಾಡುವುದರ ಮೂಲಕ ಕಡಬ ಕದಂಬ ಆಟೋ ರಿಕ್ಷಾ ಚಾಲಕ-ಮಾಲಕರ ಸಂಘದ ಸದಸ್ಯರು ಮುಚ್ಚಿದ್ದರು.
ಅ.2 ಗಾಂಧಿಜಯಂತಿಯಂದು ಚಾಲಕರು ಶ್ರಮದಾನದ ಮೂಲಕ ರಸ್ತೆಯ ಹೊಂಡ ಮುಚ್ಚಿದರು. ರಿಕ್ಷಾ ಚಾಲಕರಾದ ರಾಜೇಶ್, ದಿನಕರ, ಕೃಷ್ಣ, ಶೇಖರ, ಕೃಷ್ಣಪ್ಪ, ರಮೇಶ ದೇವಾಡಿಗ, ಸುಂದರ, ಧನಂಜಯ, ಲತೀಫ್, ಖಲೀಲ್, ಬಶೀರ್, ಲಿಂಗಪ್ಪ, ಭರತ್, ಬಾಲಕೃಷ್ಣ ಮತ್ತಿತರರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.