ಡಿ. 3: ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘದಿಂದ ಶ್ರೀ ಗುರುಪಾದ ಪೂಜೆ ಹಾಗೂ ಶ್ರೀ ದುರ್ಗಾನಮಸ್ಕಾರ ಪೂಜೆ- ಪೂರ್ವಭಾವಿ ಸಭೆ, ಕಾಳಹಸ್ತೇಂದ್ರ ಶ್ರೀ ಆಗಮನ

0

ಪುತ್ತೂರು: ದ.ಕ ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಡಿ 3 ರಂದು ಶ್ರೀ ಗುರುಪಾದ ಪೂಜೆ ಹಾಗೂ ಶ್ರೀ ದುರ್ಗಾ ನಮಸ್ಕಾರ ಪೂಜೆಯು ಪುತ್ತೂರು ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ನಡೆಯಲಿದ್ದು ಇದರ ಪೂರ್ವಭಾವಿ ಸಭೆಯು ಪುತ್ತೂರು ಬೊಳುವಾರು ಶ್ರೀ ವಿಶ್ವಕರ್ಮ ಸಭಾಭವನದಲ್ಲಿ ಅ 6ರಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಜನಾರ್ದನ ಆಚಾರ್ಯ ಕಾಣಿಯೂರು ವಹಿಸಿದ್ದರು. ಸಂಘದ ಗೌರವ ಸಲಹೆಗಾರ ಪ್ರೋಫೆಸರ್ ಪ್ರಭಾಕರ ಆಚಾರ್ಯ ನೆಹರುನಗರ, ಗೌರವ ಸಲಹರಗಾರ ಉದಯಕುಮಾರ್ ಆಚಾರ್ಯ ಕೆಮ್ಮಾಯಿ, ಕಾರ್ಯಧ್ಯಕ್ಷೆ ಪ್ರಭಾ ಹರೀಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಕೆ.ಆರ್ ಸಂಜೀವ ಆಚಾರ್ಯ, ಕೋಶಾಧಿಕಾರಿ ಸಂತೋಷ್ ಆಚಾರ್ಯ ಕಡೇಶ್ವಾಲ್ಯ, ಪದಾಧಿಕಾರಿಗಳಾದ ಸುರೇಂದ್ರ ಆಚಾರ್ಯ, ಜಗದೀಶ್ ಆಚಾರ್ಯ ಕೂರ್ನಡ್ಕ, ಚಂದ್ರಯ್ಯ ಆಚಾರ್ಯ ಅಬೀರ, ಉಮೇಶ ಆಚಾರ್ಯ, ವೆಂಕಟ್ರಮಣ ಆಚಾರ್ಯ ಪೆರ್ಲಂಪಾಡಿ,ಚಂದ್ರಶೇಖರ ಆಚಾರ್ಯ ಬನಾರಿ, ಸುಧಾಕರ ಆಚಾರ್ಯ ಕಾಣಿಯೂರು ಮತ್ತಿತರರು ಉಪಸ್ಥಿತರಿದ್ದರು.

ಕಾಳಹಸ್ತೇಂದ್ರ ಶ್ರೀ ಆಗಮನ:
ಗುರುಪಾದ ಪೂಜೆ ಹಾಗೂ ದುರ್ಗಾನಮಸ್ಕಾರ ಪೂಜೆಯು ಶ್ರೀಮದ್ ಆನೆಗುಂದಿ ಮಹಾಸಂಸ್ಥಾನ ಕಟಪಾಡಿ ಪಡುಕುತ್ಯಾರು ಪೀಠಾಧಿಶ್ವರಾದ ಅನಂತ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಗಳ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದ್ದು, ಕಾರ್ಯಕ್ರಮ ಯಶಸ್ವಿಯ ಬಗ್ಗೆ ಚರ್ಚಿಸಲಾಯಿತು.

ಕಾರ್ಯದರ್ಶಿಯಾಗಿ ಪ್ರಭಾ ಹರೀಶ್ ಆಚಾರ್ಯ ಆಯ್ಕೆ
ಸಂಘದ ಕಾರ್ಯಧ್ಯಕ್ಷೆಯಾಗಿದ್ದ ಪ್ರಭಾ ಹರೀಶ್ ಆಚಾರ್ಯ ಅವರನ್ನು ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ಸಂಜೀವ ಆಚಾರ್ಯ ಅವರನ್ನು ಕಾರ್ಯಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here