ವಿವೇಕಾನಂದ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿನಿ ಲಾಸ್ಯ ಕಿಶನ್ ಈಜು ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

0

ಪುತ್ತೂರು: ವಿದ್ಯಾಭಾರತಿ ಕರ್ನಾಟಕ ರಾಜ್ಯಮಟ್ಟದ ಈಜು ಸ್ಪರ್ಧೆಯು ಬೆಂಗಳೂರು ತನಿಸಂದ್ರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ನಡೆದಿದ್ದು, ನೆಹರುನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ 7ನೇ ತರಗತಿ ವಿದ್ಯಾರ್ಥಿನಿ ಲಾಸ್ಯ ಕಿಶನ್ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.


ಕಿಶನ್ ಡಿ.ಪಿ ಹಾಗೂ ದೀನಾ ಕಿಶನ್ ಅವರ ಪುತ್ರಿಯಾಗಿರುವ ಈಕೆ ಪುತ್ತೂರು ಶಿವರಾಮಕಾರಂತ ಬಾಲವನದ ಈಜು ತರಬೇತಿ ಕೇಂದ್ರದ ತರಬೇತುದಾರರಾದ ದೀಕ್ಷಿತ್ ಅವರ ಶಿಷ್ಯೆ.

LEAVE A REPLY

Please enter your comment!
Please enter your name here