ಉಮ್ರಾ ಯಾತ್ರೆ ಕೈಗೊಳ್ಳುತ್ತಿರುವ ಇಬ್ರಾಹಿಂ ಕಡ್ಯರವರಿಗೆ ಕಡ್ಯ ಮಹಮ್ಮದ್ ಹಾಜಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ

0

ಪುತ್ತೂರು: ಪವಿತ್ರ ಉಮ್ರಾ ಯಾತ್ರೆ ಕೈಗೊಳ್ಳುತ್ತಿರುವ ಕಡ್ಯ ಮಹಮ್ಮದ್ ಹಾಜಿ ಚಾರಿಟೇಬಲ್ ಟ್ರಸ್ಟ್ ನ ಗೌರವಾಧ್ಯಕ್ಷ ಇಬ್ರಾಹಿಂ ಕಡ್ಯ ಅವರಿಗೆ ಕಡ್ಯ ಮಹಮ್ಮದ್ ಹಾಜಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ಅ.9ರಂದು ರೆಂಜಲಾಡಿ ಫಾರೂಕ್ ಜಿ.ಎ ನಿವಾಸದಲ್ಲಿ ನಡೆಯಿತು.

ಕಡ್ಯ ಮಹಮ್ಮದ್ ಹಾಜಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಯೂಸುಫ್ ಹಾಜಿ ಕಡ್ಯ, ಪ್ರಧಾನ ಕಾರ್ಯದರ್ಶಿ ಕೆ.ಆರ್‌ ಹುಸೈನ್ ದಾರಿಮಿ ರೆಂಜಲಾಡಿ, ಕಾರ್ಯದರ್ಶಿ ಕೆ. ಎಂ ಹನೀಫ್ ರೆಂಜಲಾಡಿ, ಕೋಶಾಧಿಕಾರಿ ರಹೀಮ್ ರೆಂಜಲಾಡಿ ಸಹಿತ ವರ್ಕಿಂಗ್ ಕಮಿಟಿಯ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here