ಚಂದಳಿಕೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಿಪಿಸಿಆರ್ ಐ ನಿವೃತ್ತ ಉದ್ಯೋಗಿಗೆ ಗೌರವ ಅಭಿನಂದನೆ

0

ವಿಟ್ಲ: ಚಂದಳಿಕೆ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ, ಸಿಪಿಸಿಆರ್ ಐ ಉದ್ಯೋಗದಲ್ಲಿದ್ದು ನಿವೃತ್ತರಾದ ಸಿ. ಪುರಂದರ ಕೋಟೆಲುರವರಿಗೆ ಚಂದಳಿಕೆ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಗೌರವ ಅಭಿನಂದನೆ ಕಾರ್ಯಕ್ರಮ ನಡೆಯಿತು.


ಚಂದಳಿಕೆ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಭವಾನಿ ರೈ ಕೊಲ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕರಾದ ನಾರಾಯಣಗೌಡ, ಚಂದಳಿಕೆ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳಾದ ಮೋಹನ್ ಗೌಡ ಕಾಯರ್ ಮಾರು, ದೇಜಪ್ಪ ಪೂಜಾರಿ ನಿಡ್ಯಾ, ಸಂಜೀವ ಪೂಜಾರಿ ವಿಟ್ಲ, ಮಾಧವ ಪೂಜಾರಿ ಪಟ್ಲ, ರಾಜೀವ್ ಪೂಜಾರಿ ಚಂದಳಿಕೆ, ತೆರೇಸಾ ಬೂಡು, ಜಾಯ್ ಪ್ರವೀಣ್ ಬೂಡು, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸುಮತಿ ದೇಜಪ್ಪ, ಮುಖ್ಯೋಪಾಧ್ಯಾಯರಾದ ವಿಶ್ವನಾಥಗೌಡ ಕುಳಾಲು ,ದೈಹಿಕ ಶಿಕ್ಷಕರಾದ ಸುರೇಶ್ ಶೆಟ್ಟಿ ಕೇಪು, ರೇಷ್ಮಾ ಲೂವಿಸ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here