ಚಾರ್ವಾಕ ಸಿ.ಎ ಬ್ಯಾಂಕ್ ನಿರ್ದೇಶಕ ವಿಶ್ವನಾಥ ಮರಕ್ಕಡರವರ ಶ್ರದ್ದಾಂಜಲಿ ಸಭೆ

0

ಕಾಣಿಯೂರು: ಇತ್ತೀಚಿಗೆ ನಿಧನ ಹೊಂದಿದ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ದೋಳ್ಪಾಡಿ ಗ್ರಾಮದ ಮರಕ್ಕಡ ವಿಶ್ವನಾಥ ಗೌಡ ಅವರ ಶ್ರದ್ದಾಂಜಲಿ ಸಭೆಯು ಮರಕ್ಕಡ ಮನೆಯಲ್ಲಿ ಅ.11ರಂದು ನಡೆಯಿತು. ನಿವೃತ್ತ ಶಿಕ್ಷಕ ಸುಂದರ ಗೌಡ ಪಿಜಕ್ಕಳ ಕಡಬ ಅವರು ನುಡಿ ನಮನ ಸಲ್ಲಿಸಿದರು. ವಿಶ್ವನಾಥ ಗೌಡರ ಪತ್ನಿ ವಿಮಲ, ಪುತ್ರಿ ಯಕ್ಷಿತಾ ಹಾಗೂ ಅಳಿಯ ದೀಕ್ಷಿತ್, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆನಂದ ಗೌಡ ಮೇಲ್ಮನೆ, ಉಪಾಧ್ಯಕ್ಷ ಮುರಳೀಧರ ಪುಣ್ಚತ್ತಾರು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಶೋಕ್ ಗೌಡ, ನಿರ್ದೇಶಕಾರದ ಹರೀಶ್ ಅಂಬುಲ, ವಿಶ್ವನಾಥ ದೇವಿನಗರ, ಕಮಲ ಮುದುವ, ಕಾಣಿಯೂರು ಗ್ರಾ.ಪಂ.ಅಧ್ಯಕ್ಷ ವಿಶ್ವನಾಥ ಕೊಪ್ಪ, ಉಪಾಧ್ಯಕ್ಷೆ ಗಂಗಮ್ಮ ಗುಜ್ಜರ್ಮೆ, ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ, ದೋಳ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಆನಂದ ಬನೇರಿ ಹಾಗೂ ಗ್ರಾ.ಪಂ. ಸದಸ್ಯರು, ಸಿಬ್ಬಂದಿಗಳು ಸಿ.ಎ ಬ್ಯಾಂಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here