ಪುತ್ತೂರ‍್ದ ಪಿಲಿರಂಗ್ ಸೀಸನ್-2 ಕಾರ್ಯಕ್ರಮದ ಚಪ್ಪರ ಮುಹೂರ್ತ

0

ಪುತ್ತೂರು: ಅ.22ರಂದು ಪುತ್ತೂರು ಕಿಲ್ಲೆ ಮೈದಾನದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿರವರ ಸಾರಥ್ಯದಲ್ಲಿ ನಡೆಯುವ ಪುತ್ತೂರ‍್ದ ಪಿಲಿರಂಗ್ ಸೀಸನ್-2 ಕಾರ್ಯಕ್ರಮದ ಚಪ್ಪರ ಮುಹೂರ್ತವು ಅ.15ರಂದು ನಡೆಯಿತು. ವೇ.ಮೂ.ನವೀನ್ ಕೃಷ್ಣರವರು ಪೂಜಾ ವಿಧಿ ವಿಧಾನ ನಡೆಸಿ ಭೂಮಿಪೂಜೆ ನೆರವೇರಿಸಿ ಕಾರ್ಯಕ್ರಮದ ಯಶಸ್ಸಿಗೆ ಪ್ರಾರ್ಥಿಸಿದರು. ಪುತ್ತೂರ‍್ದ ಪಿಲಿರಂಗ್ ಸೀಸನ್-2 ಕಾರ್ಯಕ್ರಮದ ಅದ್ಯಕ್ಷ ಹಾಗೂ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅದ್ಯಕ್ಷರೂ ಆಗಿರುವ ಪಂಜಿಗುಡ್ಡೆ ಈಶ್ವರ ಭಟ್ ಮತ್ತು ಪಿಡಬ್ಲ್ಯೂಡಿ ಗುತ್ತಿಗೆದಾರರು ಹಾಗೂ ಪಿಲಿರಂಗ್ ಸೀಸನ್ -2 ಕ್ರಿಡಾ ಸಮಿತಿ ಪದಾಧಿಕಾರಿ ರಾಧಾಕೃಷ್ಣ ನಾಕ್ ಧ್ವಜಸ್ತಂಭ ನೆಡುವುದರ ಮೂಲಕ ಚಪ್ಪರ ಮುಹೂರ್ತಕ್ಕೆ ಚಾಲನೆ ನೀಡಿದರು.

ಪುತ್ತೂರ‍್ದ ಪಿಲಿರಂಗ್ ಸೀಸನ್-2 ಕ್ರೀಡಾ ಸಮಿತಿ ವಿವಿಧ ಪದಾಧಿಕಾರಿಗಳಾದ ರಂಜಿತ್ ಬಂಗೇರ, ರೋಷನ್ ರೈ ಬನ್ನೂರು, ಪೂರ್ಣೇಶ್ ಭಂಡಾರಿ, ಶ್ರೀಪ್ರಸಾದ್ ಪಾಣಾಜೆ, ಕೃಷ್ಣಪ್ರಸಾದ್ ಆಲ್ವ, ಪ್ರಜ್ವಲ್ ರೈ ತೊಟ್ಲ, ಸನತ್ ರೈ ಏಳ್ನಾಡು ಗುತ್ತು, ಜಯಂತ ನಗರ, ಶರತ್ ಕೇಪುಳು, ಹರ್ಷಿತ್‌ರಾಮ್ ಬೊಳುವಾರು, ಶಮೀರ್ ಪಳಿಕೆ, ಕಿಶೋರ್, ಸುಶಾಂತ್ ಶೆಟ್ಟಿ ಕಂಬಳಬೆಟ್ಟು, ಸುಮಿತ್ ಶೆಟ್ಟಿ ಕಂಬಳಬೆಟ್ಟು, ಶ್ರೀಕಾಂತ್, ವಿಕ್ರಂ ರೈ ಅಂತರ, ಸೀತಾ ಭಟ್, ಸುಧಾ ಕುಂಜತ್ತಾಯ, ರವಿ ಕುಂಜತ್ತಾಯ, ವಿಕ್ರಂ ಆಳ್ವ, ಹರ್ಷ ಶೆಟ್ಟಿ, ಪ್ರತೀಕ್ ಚಿಕ್ಕಪುತ್ತೂರು, ಕಾರ್ತಿಕ್ ಚಿಕ್ಕಪುತ್ತೂರು, ಧನುಷ್, ರವಿ ಮಣಿಯ, ವಿಶ್ವಜಿತ್ ಅಮ್ಮುಂಜ, ಯೋಗಿಣಿ ರೈ ಸರ್ವೆ, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಮಿಥುನ್ ರೈ, ಸಂದೀಪ್ ರೈ, ಜೆ.ಎಸ್.ಭಂಡಾರಿ, ಕಾರ್ತಿಕ್ ಗೌಡ, ಯೋಗಿಶ್ ಸಾಮಾನಿ, ರಾಮಚಂದ್ರ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here