![](https://puttur.suddinews.com/wp-content/uploads/2023/10/5e02ca06-01fd-4ac7-9d65-ab50bd8bfb6a.jpg)
ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಳ ಕಾರ್ಯಕ್ರಮದನ್ವಯ ಅ.9ರಂದು ಬಲ್ನಾಡು ವಲಯದ ಸಾಜ ನಿವಾಸಿ ಅನಾರೋಗ್ಯ ಪೀಡಿತ ಅಬ್ದುಲ್ಲಾ ಎಂಬವರಿಗೆ ವಾಟರ್ ಬೆಡ್ ನೀಡಲಾಯಿತು. ಈ ಸಂದರ್ಭದಲ್ಲಿ ಬಲ್ನಾಡು ವಲಯದ ಮೇಲ್ವಿಚಾರಕ ಪ್ರಶಾಂತ್ ಕುಮಾರ್, ಸಾರ್ಯ ಒಕ್ಕೂಟದ ಅಧ್ಯಕ್ಷ ಭಾಸ್ಕರ ಕೆ ಕೂಟೆಲು, ಬಲ್ನಾಡು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಚಂದಪ್ಪ ಪೂಜಾರಿ ಕಾಡ್ಲ, ರವಿ ಹಸಂತಡ್ಕ, ಸಾರ್ಯ ಒಕ್ಕೂಟದ ಸೇವಾ ಪ್ರತಿನಿಧಿ ಲೋಲಾಕ್ಷಿ ಉಪಸ್ಥಿತರಿದ್ದರು.