ಕ್ರಿಕೆಟ್: ಸುದಾನದ ವಿದ್ಯಾರ್ಥಿಗಳು ಮೈಸೂರು ವಿಭಾಗೀಯ ಮಟಕ್ಕೆ

0

ಪುತ್ತೂರು: ಶಾಲಾ ಶಿಕ್ಷಣ ಇಲಾಖೆ, ದ.ಕ.ಜಿ.ಪಂ ಉಪನಿರ್ದೇಶಕರ (ಆಡಳಿತ) ಕಛೇರಿ ಮಂಗಳೂರು ಇದರ ಆಶ್ರಯದಲ್ಲಿ ಅ.13ರಂದು ಮಂಗಳೂರಿನ ನೆಹರು ಮೈದಾನದಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ಜಿಲ್ಲಾ ಕ್ರಿಕೆಟ್ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಸುದಾನದ ವಿದ್ಯಾರ್ಥಿಗಳಾದ ತೇಜಸ್ ಎಸ್ ಕೆ (10ನೇ) ಅಕ್ಷಯ  ನಾಯ್ಕ್ (10ನೇ) ಮನೀಶ್ ಶೆಟ್ಟಿ(8ನೇ) ಶೇಖ್ ಮಹಮ್ಮದ್ ಅರ್ಹನ್(7ನೇ) ಸಂಭ್ರಮ್ ಶೆಟ್ಟಿ(6ನೇ) ಉಡುಪಿಯಲ್ಲಿ ನಡೆಯುವ ಮೈಸೂರ್ ವಿಭಾಗೀಯ ಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ. ಇವರನ್ನು ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ದೈಹಿಕ ಶಿಕ್ಷಣ ಶಿಕ್ಷಕರ ಪುಷ್ಪರಾಜ್, ಲೀಲಾವತಿ, ಜೀವಿತ ಅಭಿನಂದಿಸಿದರು. ವಿದ್ಯಾರ್ಥಿಗಳು ಸುಧಾನ ಕ್ರಿಕೆಟ್ ಅಕಾಡೆಮಿಯಲ್ಲಿ ಕಿರಣ್ ಕುಮಾರ್ ಹಾಗೂ ಸುದಾನ ಶಾಲೆಯ ದೈಹಿಕ  ಶಿಕ್ಷಣ ಶಿಕ್ಷಕ ನವೀನ್ ಇವರಿಂದ ತರಬೇತಿ ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here