ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಚಿನ್ನದ ಪ್ರಭಾವಳಿ ಸಮರ್ಪಿಸಿದ ಬಿಹಾರದ ಉದ್ಯಮಿ

0

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಚಿನ್ನದ ಪ್ರಭಾವಳಿಯನ್ನು ಅ.21ರಂದು ಸಮರ್ಪಿಸಲಾಯಿತು. ಬಿಹಾರ ಮೂಲದ ಡಾ. ರಾಹುಲ್ ಕುಮಾರ್ ಪಾಟ್ನಾ ಶನಿವಾರ ವಿಶೇಷ ಪೂಜೆ ಸಲ್ಲಿಸಿ, ಪ್ರಭಾವಳಿಯನ್ನು ಸಮರ್ಪಿಸಲಾಯಿತು.

ಮದುವೆ ಬಳಿಕ ಸಂತಾನಕ್ಕಾಗಿ ಹೇಳಲಾದ ಹರಕೆ ಸೇವೆ ಇದಾಗಿದ್ದು, ಪುತ್ರ ಸಂತಾನ ಆದ ನಂತರ ದಂಪತಿ ಕ್ಷೇತ್ರಕ್ಕೆ ಆಗಮಿಸಿ ಹರಕೆ ತೀರಿಸಿರುವುದಾಗಿ ತಿಳಿದುಬಂದಿದೆ. ಹರಕೆ ತೀರಿಸುವ ಅಂಗವಾಗಿ ಡಾ. ರಾಹುಲ್ ಕುಮಾರ್ ದಂಪತಿ ಪುತ್ರನ ಉಪಸ್ಥಿತಿಯಲ್ಲಿ ಅರ್ಚಕ ಸತ್ಯನಾರಾಯಣ ನೂರಿತ್ತಾಯ ಅವರು ಬ್ರಹ್ಮಾರ್ಪಣೆಗೈದು, ತುಲಾಭಾರ ಸೇವೆ ನೆರವೇರಿಸಿದರು.

LEAVE A REPLY

Please enter your comment!
Please enter your name here