ಕೌಡಿಚ್ಚಾರು ವಿವೇಕಾನಂದ ಯುವಕ ವೃಂದದ ನೂತನ ಕಛೇರಿ ಉದ್ಘಾಟನೆ

0

ಪುತ್ತೂರು: ಅರಿಯಡ್ಕ ತಾಲೂಕು ಅತ್ಯುತ್ತಮ ಯುವ ಸಂಸ್ಥೆ ಪ್ರಶಸ್ತಿ ಪುರಸ್ಕೃತ ಕೌಡಿಚ್ಚಾರು ಅರಿಯಡ್ಕದ ವಿವೇಕಾನಂದ ಯುವಕ ವೃಂದ ಇದರ ನೂತನ ಕಛೇರಿಯು ಕೌಡಿಚ್ಚಾರು ಗುರುಕೃಪಾ ಸಂಕೀರ್ಣದಲ್ಲಿ ಅ.22 ರಂದು ಅರಿಯಡ್ಕ ಗ್ರಾಮ ಪಂಚಾಯತ್ ಇದರ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ ಉದ್ಘಾಟಿಸಿದರು.

ಯುವಕ ವೃಂದದ ಅಧ್ಯಕ್ಷ ಉದಯ ಕುಮಾರ್ ಆಕಾಯಿ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮವನ್ನು ಗ್ರಾಮ ದೈವ ಧೂಮಾವತಿ ದೈವಸ್ಥಾನದ ಪ್ರಧಾನಕರ್ಮಿ ಸದಾಶಿವ ಮಣಿಯಾಣಿ ಕುತ್ಯಾಡಿ ದೀಪ ಪ್ರಜ್ವಲಿಸಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮುಖ್ಯ ಅಥಿತಿಗಳಾಗಿ ಶ್ರೀ ಕೃಷ್ಣ ಭಜನಾ ಮಂದಿರ ಇದರ ಆಡಳಿತ ಸಮಿತಿಯ ಅಧ್ಯಕ್ಷ ಎ ರಾಮದಾಸ ರೈ ಮದ್ಲ, ಬ್ಯಾಂಕ್ ಆಫ್ ಬರೋಡ ಕೊಳ್ಳಮೋಗ್ರು ಶಾಖೆಯ ತಿಮಣ್ಣ ನಾಯ್ಕ ಆಕಾಯಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು. ತಮ್ಮ ವ್ಯಾಪಾರ ಸ್ಥಳದಲ್ಲಿ 10 ವರ್ಷಗಳ ಕಾಲ ಕಚೇರಿಯ ನಡೆಸಲು ಅವಕಾಶವನ್ನು ಮಾಡಿಕೊಟ್ಟ ಯುವಕ ವೃಂದದ ಗೌರವಾಧ್ಯಕ್ಷ ಬಾಲಕೃಷ್ಣ ಕುಲಾಲ್ ಕೌಡಿಚ್ಚಾರು ಮತ್ತು ಸಂಸ್ಥೆಯ ಗೌರವ ಸಲಹೆಗಾರ ಸಂತೋಷ್‌ ಮಣಿಯಾಣಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಯುವಕ ವೃಂದದ ಸಾಂಸ್ಕೃತಿಕ ಕಾರ್ಯದರ್ಶಿ ವರುಣ್ ಕುಮಾರ್ ಕಚೇರಿಗೆ ಅಗತ್ಯವಾದ ಕುರ್ಚಿಗಳನ್ನು ಉಡುಗೊರೆಯಾಗಿ ನೀಡಿದರು.

LEAVE A REPLY

Please enter your comment!
Please enter your name here