ಕಜೆ ಅನವುಗಾರ್ ಕುಟುಂಬ ಜೀರ್ಣೋದ್ಧಾರಕ್ಕೆ ಧರ್ಮಸ್ಥಳ ಕ್ಷೇತ್ರದಿಂದ ರೂ. 2.5 ಲಕ್ಷ ದೇಣಿಗೆ

0

ಬೆಟ್ಟಂಪಾಡಿ: ಇಲ್ಲಿನ ಕಜೆ ಅನವುಗಾರ್ ಕುಟುಂಬ ತರವಾಡು ಟ್ರಸ್ಟ್ ಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ. 2.5 ಲಕ್ಷ ದೇಣಿಗೆಯನ್ನು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನೀಡಿರುತ್ತಾರೆ. ದೇಣಿಗೆ ಮೊತ್ತದ ಡಿಡಿ ಯನ್ನು ತರವಾಡು ಟ್ರಸ್ಟ್ ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು. ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುವರು ಡಿಡಿ ಹಸ್ತಾಂತರಿಸಿದರು.

ಈ ವೇಳೆ ಪ್ರಮುಖರಾದ ಜಗನ್ನಾಥ ರೈ ಕೊಮ್ಮಂಡ, ಪ್ರಕಾಶ್ ರೈ ಬೈಲಾಡಿ, ರೆಂಜ ಶ್ರೀ ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ಜಯರಾಮ ರೈ ಮೂರ್ಕಾಜೆ, ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಶಿಧರ್, ಪದ್ಮಾವತಿ ದೈಯರಡ್ಕ, ಜಯಂತಿ, ಅನವುಗಾರ್ ಕುಟುಂಬ ತರವಾಡು ಟ್ರಸ್ಟ್ ನ ಗೌರವಧ್ಯಕ್ಷ ನಾರಾಯಣ ನಾಯ್ಕ್ ಕಜೆ, ಅಧ್ಯಕ್ಷ ಸೇಸಪ್ಪ ನಾಯ್ಕ್ ಕಜೆ, ಕೋಶಾಧಿಕಾರಿ ಮೋನಪ್ಪ ನಾಯ್ಕ್ ಕಜೆ, ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ನಾಗರಾಜ್ ಕಜೆ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.
ಟ್ರಸ್ಟ್ ಕಾರ್ಯದರ್ಶಿ ಜಯಪ್ರಸಾದ್ ಚೆಲ್ಯಡ್ಕ ಸ್ವಾಗತಿಸಿ, ತಿಲಕ್‌ರಾಜ್ ಕಜೆ ವಂದಿಸಿದರು. ಜಗನ್ನಾಥ ಪಾಟಾಳಿ ಕೋನಡ್ಕ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here